ಲಿಂಗಾಯತರ ನಂಬಿಕೆ ಬದಲಿಸಲು ವೀರಶೈವ ಮಹಾಸಭಾಕ್ಕೆ ಅಧಿಕಾರ ಕೊಟ್ಟವರು ಯಾರು?

ಜಯಂತಿ ಎಂದರೆ ಜಾತ್ರೆ ಮಾಡುವುದಲ್ಲ, 770 ಶರಣರು ಕೊಟ್ಟಿರುವ ಸಂಖ್ಯೆ. ಅದನ್ನು 771 ಮಾಡಲು ಸಾಧ್ಯವಿಲ್ಲ. ಮಹಾಸಭೆಗೆ ಆರು ಪ್ರಶ್ನೆಗಳು.

ಬೆಂಗಳೂರು

ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿಯವರು ಕಳಿಸಿರುವ ವಿವಾದಿತ ಸುತ್ತೋಲೆಯ ಬಗ್ಗೆ ಶರಣ ತತ್ವ ಚಿಂತಕ ಪ್ರೊ. ಪಂಚಾಕ್ಷರಿ ಹಳೇಬೀಡು ಬಸವ ರೇಡಿಯೋ ಕಾರ್ಯಕ್ರಮದಲ್ಲಿ ಏಪ್ರಿಲ್ 17 ಮಾತನಾಡಿದರು.

ವಚನ ಪರಂಪರೆಯ ಬೆಳಕಿನಲ್ಲಿ ಬಿದರಿ ಆದೇಶಗಳನ್ನು ಚರ್ಚಿಸಿದರು.

12ನೆ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪ ಸ್ಥಾಪನೆ ಆದಾಗ ಸದಸ್ಯರಾಗಿ ಬಂದಿದ್ದು ಎಲ್ಲಾ ಕೆಳ ವರ್ಗದ ಕಾಯಕ ಜೀವಿಗಳು. ಅಕ್ಷರ ಜ್ಞಾನವೇ ಇಲ್ಲದ ಕಾಯಕ ಜೀವಿಗಳಿಗೆ ಅಕ್ಷರ ಜ್ಞಾನದ ಜೊತೆ ಅನುಭಾವಿಗಳಾಗಿ ವಚನಗಳನ್ನು ರಚಿಸುವ ಹಂತಕ್ಕೆ ಅವರಿಗೆ ಶಕ್ತಿ ತುಂಬಲಾಗಿತ್ತು.

ಅಂದಿನ ಅನುಭವ ಮಂಟಪದಲ್ಲಿ 770 ಅಮರಗಣಂಗಳು ಇದ್ದರು ಮತ್ತು ಅವರೆಲ್ಲ ಅನುಭಾವಿ ಸಾಧಕರಾಗಿದ್ದರು. ಅವರೆಲ್ಲರೂ ಸೇರಿ ಲಿಂಗಾಯತ ಸಿದ್ಧಾಂತವನ್ನು ಅವರ ಅನುಭಾವದ ಹಿನ್ನೆಲೆಯಲ್ಲಿ ನಮಗೆ ವಚನಗಳ ರೂಪದಲ್ಲಿ ಕಟ್ಟಿ ಕೊಟ್ಟಿದ್ದಾರೆ. ಅದನ್ನು ಅನುಸರಿಸುವುದು ಮಾತ್ರ ನಮ್ಮ ಕೆಲಸವಾಗಬೇಕು. ಇದನ್ನು ಮರೆತಿರುವ ವೀರಶೈವ ಮಹಾಸಭೆ ಲಿಂಗಾಯತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ.

ಶಂಕರ ಬಿದರಿಯವರು ಕಳಿಸಿರುವ ಸುತ್ತೋಲೆಯಲ್ಲಿ ಸಮಯ ಉಳಿಸಲು ಎಲ್ಲರ ಜಯಂತಿಯನ್ನು ಒಟ್ಟಿಗೆ ಮಾಡಲು ಹೇಳಿದ್ದಾರೆ.

ಜಯಂತಿ ಎಂದರೆ ದೊಡ್ಡ ಜಾತ್ರೆ ಮಾಡುವುದಲ್ಲ. ಜಯಂತಿಯ ದಿನ ನಾವು ಎಲ್ಲಿರುತ್ತೇವೆಯೋ ಅಲ್ಲಿಯೇ ಶರಣರ ಬಗ್ಗೆ ತಿಳಿದುಕೊಳ್ಳುವುದು, ಅವರ ವಚನಗಳನ್ನು ಓದುವುದು, ಅವರ ಸಾಧನೆ ಮತ್ತು ಕೊಡುಗೆಗಳ ಬಗ್ಗೆ ತಿಳಿದುಕೊಳ್ಳುವ ಕೆಲಸ ಮಾಡಬೇಕು.

ಸಮಾಜಕ್ಕೆ ಉಪಯೋಗವಾಗುವಂತೆ ಎಲ್ಲಾ ಶರಣರ ಜಯಂತಿಯನ್ನು ಅಂದಂದೆ ಆಚರಿಸಬೇಕು.

ಎಲ್ಲಾ ಒಟ್ಟಿಗೆ ಸೇರಿಸಿದರೆ ಬಸವಣ್ಣನವರ ವಿಷಯವನ್ನು ಬಿಟ್ಟು ಬೇರೆ ಶರಣರ ಬಗ್ಗೆ ಹೆಚ್ಚು ಚರ್ಚೆ ಮಾಡಲು ಸಾಧ್ಯವಿಲ್ಲ. ಆದುದರಿಂದ ಎರಡು ಅಥವಾ ಹೆಚ್ಚು ಜನರ ಜಯಂತಿಯನ್ನು ಒಟ್ಟಿಗೆ ಮಾಡುವುದು ಸೂಕ್ತವಲ್ಲ.

ಇಂತಹ ತೀರ್ಮಾನ ತೀರ್ಮಾನ ತೆಗೆದುಕೊಳ್ಳಲು ನೀವು ಯಾರು ಮತ್ತು ನಿಮಗೆ ಈ ಅಧಿಕಾರವನ್ನು ಕೊಟ್ಟವರು ಯಾರು, ಎಂದು ಡಾ ಪಂಚಾಕ್ಷರಿ ಕೇಳಿದರು.

ಹಾಗೆಯೆ ಬಸವಣ್ಣನವರ ಜಯಂತಿಯ ಜೊತೆ ರೇಣುಕಾ ಜಯಂತಿಯನ್ನು ಸೇರಿಸುವ ಪ್ರಯತ್ನ ಯಾಕೆ ಮಾಡುತ್ತಿದ್ದೀರಾ? 770 ಶರಣರು ಕೊಟ್ಟಿರುವ ಸಂಖ್ಯೆ. ಅದನ್ನು 771 ಮಾಡಲು ಸಾಧ್ಯವಿಲ್ಲ.ಅದನ್ನು 771 ಮಾಡುವ ಅಧಿಕಾರ ಕೊಟ್ಟವರು ಯಾರು, ಎಂದೂ ಪ್ರಶ್ನಿಸಿದರು.

ವೀರಶೈವ ಮಹಾಸಭಾಗೆ ಒಟ್ಟು ಆರು ಪ್ರಶ್ನೆಗಳನ್ನು ಡಾ ಪಂಚಾಕ್ಷರಿ ಕೇಳಿದರು.

  1. ಯುಗ-ಯುಗಗಳಷ್ಟು ಪುರಾತನರಾದ ಜಗದ್ಗುರು ರೇಣುಕಾಚಾರ್ಯರನ್ನು ಬಸವಾದಿ ಶರಣರು ಅಮರಗಣಗಳೆಂದು ಏಕೆ ಪರಿಗಣಿಸಲಿಲ್ಲ?
  2. ಶರಣರು ಮಾನ್ಯ ಮಾಡದ ರೇಣುಕಾಚಾರ್ಯರನ್ನು 771 ನೇ ಅಮರಗಣರಾಗಿ ಅಮರಗಣಂಗಳ ಗುಂಪಿಗೆ ಸೇರಿಸಲು ನಿಮಗೆ ಯಾವ ಅಧಿಕಾರವಿದೆ? ನೀವು ಶರಣತ್ವ ಸಾಧಿಸಿದ ಅನುಭಾವಿಗಳೆ?
  3. ಶೈವ ಪರಂಪರೆಯ 63 ಪುರಾತನರನ್ನು ಬಸವಣ್ಣನವರು ಸ್ಮರಿಸಿದ್ದಾರೆಯೇ ಹೊರತು ಅಮರಗಣಂಗಳೆಂದು ಏಕೆ ಪರಿಗಣಿಸಿಲ್ಲ?
  4. ಬಸವೋತ್ತರ ಕಾಲದ ಎಡೆಯೂರು ಸಿದ್ದಲಿಂಗೇಶ್ವರರು, ಮಲಯಮಹದೇಶ್ವರರು, ಷಣ್ಮುಖ ಶಿವಯೋಗಿಗಳು, ಫ ಗು ಹಳಕಟ್ಟಿ, ಹೀಗೆ ಅನೇಕ ಶರಣರು ಲಿಂಗಾಯತ ಧರ್ಮದ ಬೆಳವಣಿಗೆಗೆ ಅತ್ಯುತ್ತಮ ಕಾಣಿಕೆ ನೀಡಿದ್ದಾರೆ. ಅವರಾರನ್ನೂ ಅಮರಗಣಗಳನ್ನಾಗಿಸದೆ, ಲಿಂಗಾಯತ ಧರ್ಮದ ಹುಟ್ಟು ಹಾಗೂ ಬೆಳವಣಿಗೆಗೆ ಯಾವುದೇ ಕೊಡುಗೆ ನೀಡದ ರೇಣುಕಾಚಾರ್ಯರನ್ನು ಅಮರಗಣವಾಗಿಸುವ ಹುನ್ನಾರವೇಕೆ?
  5. ಸಂಸ್ಕೃತದ ವೀರಶೈವ ಸಾಹಿತ್ಯ ಹಾಗೂ ಶರಣರ ಕನ್ನಡದ ಲಿಂಗಾಯತ ವಚನ ಸಾಹಿತ್ಯ ಒಂದೇ ಆಗಿದ್ದರೆ, ಅಂದು ಕಲ್ಯಾಣದಲ್ಲಿ ವಿಪ್ಲವ ಉಂಟಾಗಿದ್ದು ಏಕೆ? ಬೀದಿಬೀದಿಗಳಲ್ಲಿ ಶರಣರ ವಧೆ ಮಾಡಿದ್ದು ಏಕೆ? ವಚನ ಸಾಹಿತ್ಯ ಸುಟ್ಟು ಹಾಕಿದ್ದು ಏಕೆ? ಬಸವಣ್ಣನವರ ಗಡೀಪಾರು ಏಕಾಯಿತು?
  6. ಮಾರ್ಚ್ 16 ರಂದು ರೇಣುಕಾಚಾರ್ಯ ಜಯಂತಿಯನ್ನು ಸರ್ಕಾರವೇ ಆಚರಿಸುತ್ತಿದ್ದರೂ ಬಸವಜಯಂತಿಯಂದೇ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಲು ಕರೆಕೊಡುವ ಹಿಂದಿನ ಹುನ್ನಾರ, ಮರ್ಮವೇನು?
  7. 900 ವರ್ಷಗಳ ಹಿಂದೆಯೇ ಅಕ್ಷರ ಕಲಿಕೆಯೂ ಇಲ್ಲದ ಶರಣರಿಗೆ ಪ್ರಾಪ್ತವಾದ ವಾಸ್ತವ ಸತ್ಯದ ಅರಿವು ಇಂಥಾ ವಿಜ್ಞಾನ ಯುಗದಲ್ಲೂ ಅನೇಕ ಕಠಿಣತಮ ಪರೀಕ್ಷೆಗಳನ್ನು ಪಾಸು ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಿ ಜ್ಞಾನಿಗಳೆನಿಸಿದ ಮಹನೀಯರುಗಳಿಗೆ ಅರ್ಥವಾಗದಿರುವುದು ಹೇಗೆ?

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/CbYKNyyLfPXA0Br4Dli0d8

Share This Article
25 Comments
  • ಪ್ರತಿಭೆಯ ಜತೆಗೆ ವಾಸ್ತವಿಕ ಸತ್ಯದ ಅರಿವು ಮತ್ತು ಐತಿಹಾಸಿಕ ತಿಳುವಳಿಕೆ ಹೊಂದಿರಬೇಕು. ಹುಂಬರಂತೆ ತನ್ನ ಅಧಿಕಾರದ ದಿಮ್ಮಿನಲ್ಲಿ ಎನೊನೋ ಹೆಳಿಕೆಗಳನು ಹರಿಯಬಿಟ್ಟು ಹುಂಬತನವನ್ನು ಮತ್ತೆ ಮತ್ತೆ ಪ್ರದರಶಿಸಬಾರದು.

    • ರೇಣುಕಾಚಾರ್ಯರನ್ನು ಜಾತಿ ಜಂಗಮರು ಮಾತ್ರ ಒಪ್ಪುತ್ತಾರೆ. ಕಾರಣ ಅವರ ಜಯಂತಿ ಸರಕಾರದ ವತಿಯಿಂದ ಮಾಡಿಸಲು ಯಶಸ್ವಿ ಆಗಿರಬಹುದು. ಆದರೆ ಲಿಂಗಾಯತರ ಮನಸ್ಸು ಒಬ್ಬ ಕಲಲ್ಲಿ ಹುಟ್ಟಿದ ವ್ಯಕ್ತಿಯನ್ನು ನಂಬುವುದಿಲ್ಲ.
      ಇನ್ನೂ ಒಂದು ಹೆಜ್ಜೆ ಜನರು ಮುಂದೆ ಹೋಗಿ ರೇಣುಕಾಚಾರ್ಯ, ಸಿದ್ದಾಂತ ಶಿಖಾಮಣಿ ಬಗ್ಗೆ ಹೇಳುವ ಮತ್ತು ಜೈ ಪಂಚಾಚಾರ್ಯ ಅನ್ನುವ ಜಾತಿ ಜಂಗಮರಿಗೆ ದಕ್ಷಿಣೆ / ದಾನ ಕೊಡುವುದನ್ನು ನಿಲ್ಲಿಸಬೇಕು.

      ಯಾರು ಒಪ್ಪದ ರೇಣುಕಾಚಾರ್ಯನನ್ನು ಬಸವ ಜಯಂತಿ ಮೂಲಕ ಜನರ ಮನಸಲ್ಲಿ ಮೂಡಿಸಿ, ಕ್ರಮೇಣ ಬಸವಣ್ಣರನ್ನು ಮರೆಮಾಚುವ ಹುನ್ನಾರ ಇದು.

      • Basavajayanthi for any reason should not be meddled and traditional sanctity maintained with the faith ingrained over centuries.

      • 7 ಪ್ರಶ್ನೆಗಳಿಗೆ ಉತ್ತರ ಇವರಿಂದ ಸಾಧ್ಯವಿಲ್ಲ ಏಕೆಂದರೆ ಇವರ ಹುನ್ನಾರವೆ ಬೇರೆ ಇದೆ ಶಂಕರ ಬಿದರಿ ಅವರೆ ನೀವು ಕರ್ನಾಟಕದಲ್ಲಿ ತುಂಬ ಹೆಸರುವಾಸಿಯಾಗಿದ್ದರು ಇಂಥ ಹುಚ್ಚುತನಕ್ಕೆ ಕೈ ಹಾಕಬೇಡಿ ಏಕೆಂದರೆ ಎಲ್ಲರೂ ವಚನ ಸಾಹಿತ್ಯ ಒದತಾ ಇದ್ದಾರೆ ಲಿಂಗಾಯತ ಧರ್ಮದ ಜಾಗೃತಿ ಆಗತಾ ಇದೆ ನಿಮ್ಮ ಹೆಸರು ಕೆಡಿಸಿಕೊಳ್ಳಬೇಡಿ

        • ಮೊದಲು ಜಾತಿ ಪ್ರಮಾಣ ಪತ್ರದಲ್ಲಿ ಬರುವ ವೀರಶೈವ/ ಲಿಂಗಾಯತ. ಪದಗಳನ್ನು ತೆಗೆದು ಹಾಕಿಸಿ
          ಕೇವಲ ಲಿಂಗಾಯತ. ಎಂದು ಬರುವಂತೆ ಮಾಡಿ

      • ಸಮಸ್ತ ಶರಣ ಬಂಧುಗಳಿಗೆ ಅನಂತ ಕೋಟಿ ಶರಣು ಶರಣಾರ್ಥಿ ಗಳು…..
        ಆರಂಭದಿಂದಲೂ ಒಂದಲ್ಲ ಒಂದು ವಿಷಯ ಬಸವಾದಿ ಶರಣಸಮೋಹದ ಜನರಿಗೆ ಎದುರಾಗುತ್ತವೆ ಇದೆ….
        ಜಗಜ್ಯೋತಿ ಬಸವಣ್ಣನವರು 12ನೇಯ ಶತಮಾನದಲ್ಲಿ ಅವರ ಸಮಕಾಲೀನ ಕಾಯಕಜೀವಿಗಳನ್ನು ಸೇರಿಸಿ ಬಹುದೊಡ್ಡ ಕ್ರಾಂತಿ ಮಾಡಿದ್ದು ವಚನಗಳ ಚಳುವಳಿಯನ್ಯಾಗಿ ಮಾಡಿ.. ಸಮಾಜದ ಎಲ್ಲಾ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ ಮಹಾನ್ ವ್ಯಕ್ತಿ ಅವರಿಗೆ ವಿಶ್ವಮಾನವ ಎನ್ನಬೇಕು ವಿಶ್ವ ಗುರು ಹೌದು…..‌
        ಶೈವ ಪರಂಪರೆಯ ಸನಾತನವಾದಿಗಳು, ವೈಧಿಕ ಶಾಹಿಯ ಪರಂಪರೆ, ಪುರೋಹಿತ ಶಾಹಿಗಳು….. “ಬಸವಣ್ಣನವರ ತತ್ವ”ಎಂದಿಗೂ ಒಪ್ಪುವುದಿಲ್ಲ ಇಲ್ಲಿ ಬಂದಿರುವುದು..”ಲಿಂಗಾಯಿತರು”ಅನ್ನುವ ಶಬ್ದ..ಶೈವಲಿಂಗಾಯರು..ಸ್ಥಾವರ ಲಿಂಗವನ್ನು ಆರಾಧಿಸುತ್ತಾರೆ.. ಪೂಜೆ, ರುದ್ರಾಭಿಷೇಕ,ಹೋಮ,ಹವನ,ಹವಳ… ಇತ್ಯಾದಿ ಅನುಸರಿಸುತ್ತಾರೆ..ಇಲ್ಲಿ ಸಾಕಷ್ಟು ಕಟ್ಟುಪಾಡುಗಳು, ನಿರ್ಬಂಧಗಳು ಇವೆ.. ಹಿಂದಿನಿಂದ ಲೂ ಪಾರಂಪರಿಕ ವಾಗಿಬಂದಿವೆ… ಇಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಇಲ್ಲ ಸಮಾನತೆ ಇಲ್ಲವೆ ಇಲ್ಲ… ಜಾತಿಪದ್ಧತಿ ವ್ಯವಸ್ಥೆ ಇದೆ..
        ಹಿಂದಿನಿಂದಲೂ ಪರಂಪರಾಗತ ಬಂದಿವೆ….
        ಆದರೆ ಬಸವಣ್ಣನವರ ವಚನ ಸಂಸ್ಕೃತಿಯನ್ನು ಸೃಷ್ಟಿ ಕರ್ತನ ಕುರುಹು “ಇಷ್ಟಲಿಂಗ” ಧ್ಯಾನ ಏಕೋಪಾಸನೆ ಯಾವುದೇ ಜಾತಿ,ಮತ,ಕುಲ, ಧರ್ಮ, ಮೇಲುಕೀಳು ಅನ್ನೋದು ಇಲ್ಲ ಎಲ್ಲರೂ ಮುಕ್ತವಾಗಿ ಇಷ್ಟ ಲಿಂಗಧಾರಣೆ ಮಾಡಿಕೊಂಡು ..ಲಿಂಗದ ಧ್ಯಾನ ಏಕೋಪಾಸನೆ ಏಕಾಗ್ರತೆ ಸಾಧನೆ ಮಾರ್ಗ ಮುಟ್ಟಲೂ ನಿರಂತರ ಪ್ರಯತ್ನ.. ಅರಿವೇ ಗುರು., ಕಾಯಕಕ್ಕೆ ಮಹತ್ವ,ಗುರು, ಲಿಂಗ,ಜಂಗಮ,ಕಾಯಕ,ದಾಸೋಹ,ಈ ಸಿದ್ಧಾಂತಗಳು ತುಂಬಾ ಭಿನ್ನವಾಗಿವೆ…..ಸರ್ವ ಕಆಲಇಕಸತ್ಯಸಂಗತಿಯನ್ನು ಹೇಳುವ ಪ್ರಸ್ತುತ ಪ್ರತ್ಯಕ್ಷ ಸಿದ್ದಾಂತಗಳಿವೆ… ವೈಜ್ಞಾನಿಕ ಮತ್ತು ವೈಚಾರಿಕ ನೆಲೆಯಲ್ಲಿ ಇರುತ್ತದೆ…. ಅದಕ್ಕೆ ಲಿಂಗಾಯತರು/,ವೀರಶೈವರು ಅನ್ನುವುದು ಬೇಡ….. ಇದರಲ್ಲಿ ತುಂಬಾ ಗೊಂದಲವಿದೆ…… ಹಲವಾರು ವಿದ್ವಾಂಸರು ಮತ್ತು ಶರಣಪರಸಂಘಟನೆಯವರು ಕಾಯಕಶರಣಜೀವಿಗಳಪ್ರಕಾರ… “ಬಸವಧರ್ಮ” ಅಂತ ಆಗಬೇಕು ಶರಣ ಸಂಸ್ಕೃತಿ ಇರಬೇಕು ವಚನ ಸಾಹಿತ್ಯ ಧರ್ಮ ಗ್ರಂಥ ಆಗಬೇಕು…. ಇಷ್ಟವಾದವರು ಇರುತ್ತಾರೆ ಇರದೆ ಇದ್ದವರು ತಮ್ಮ ಮೂಲಸ್ಥಾನಕ್ಕೆ ಹೋಗುತ್ತಾರೆ…
        “ಲಿಂಗಾಯತ” ಗೊಂದಲ ಬೇಡವೇ ಬೇಡ ಅನಿಸುತ್ತದೆ.. ಜೈ ಬಸವಧರ್ಮ ಜೈ ಶರಣಧರ್ಮ……

      • ಯಾವ ಕಾರಣಕ್ಕೂ ಬಸವ ಜಯಂತಿಯಂದುರೇಣುಕಾಚಾರ್ಯ ಇವರ ಜಯಂತಿಯನ್ನು ಸೇರಿಸಬಾರದು ಆದೇಶವನ್ನು ಕೂಡಲೇ ಹಿಂದಕ್ಕೆ ತೆಗೆದುಕೊಂಡು ಎಲ್ಲಾ ವೀರಶೈವ ಲಿಂಗಾಯತ ಸ್ವಾಮಿಗಳನ್ನು ಒಂದೇ ವೇದಿಕೆಯ ಮೇಲೆ ಕುಳಿತು ಕೊಳ್ಳಲು ಚಿಂತಿಸಿ

    • ಪಂಚಾಚಾರ್ಯರೆಂಬ ಸುಡುವ ಕೆಂಡದ ಸಹವಾಸ ಮಾಡಿದ್ದಕ್ಕೆ ಬಿದರಿಯವರೂ ಕೈಸುಟ್ಟುಕೊಂಡರು…!

  • ಪಂಚಾಕ್ಷರಿ ಸರ್ ಅವರು ಹೇಳಿದ ಹಾಗೆ ಐದು ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಶಂಕರ್ ಬಿದರೆ ಅವರು ತಾಕತ್ತಿದ್ದರೆ ಉತ್ತರಗಳನ್ನು ಕೊಡಿ ಇಲ್ಲವಾದರೆ ಸುಮ್ಮನೆ ಕೂತುಬಿಡಿ ನಿಮ್ಮಂತವರು ಲಿಂಗಾಯತ ಧರ್ಮವನ್ನು ಎಲ್ಲಿಗೆ ಒಯ್ದು ನಿಲ್ಲಿಸಬೇಕೆಂದಿದ್ದರೂ ಅರ್ಥವಾಗುತ್ತಿಲ್ಲ ಧರ್ಮ ಯಾವುದು ಜಾತಿ ಯಾವುದು ಎಂದು ಮೊದಲಿಗೆ ನೀವು ತಿಳಿದುಕೊಳ್ಳಬೇಕು ಶಂಕರ್ ಬಿದರಿಸಾರ್ ಅವರೇ ಮೊದಲು ನೀವು ತಿಳಿದುಕೊಳ್ಳಿ ಶಂಕರ್ ಬಿದರೆ ಸಾರ್ ಅವರೇ , ನೀವು ಹುಟ್ಟಿದ ದಿನದಂದು ನಿಮಗೆ ಶುಭಾಶಯ ತಿಳಿಸುವರೆ ಹೊರತು ಪಕ್ಕದ ಮನೆಯವರಿಗೆಲ್ಲ ಮೊದಲಿಗೆ ನೀವು ಈ ಸಣ್ಣ ವಿಷಯ ತಿಳಿದಿಲ್ಲ ಎಂದರೆ ನಿಮಗೆ ಏನೆನ್ನ ಬೇಕು ಅರ್ಥವಾಗುತ್ತಿಲ್ಲ ನಿಮಗೆ ಒಂದು ದೊಡ್ಡ ಶರಣು ಶರಣಾರ್ಥಿಗಳು

  • ನಿಮ್ಮ ಎಲ್ಲಾ ವಿಚಾರಗಳಿಗೆ ನಮ್ಮ ಒಪ್ಪಿಗೆ ಇದೇ ರೀತಿಯಾಗಿ ಕೇಳುವುದು ಮುಂದುವರೆಯಲಿ. ಇಲ್ಲಿಯವರೆಗೆ ನಾವುಗಳು ಸುಮನಿದ್ದುದರಿಂದ ಇಂದು ಇಂಥ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಇದರಲ್ಲಿರುವ ರಾಜಕೀಯವನ್ನು ನಾವು ಅರ್ಥ ಮಾಡಿಕೊಳ್ಳಬೆಕಾಗಿದೆ. ನಿಮ್ಮ ಪ್ರಯತ್ನಕ್ಕೆ ಅನಂತ ಧನ್ಯವಾದಗಳು.

    • ಲಿಂಗಾಯತ ಸಮುದಾಯದ ಮುಖಂಡ ರುಗಳು ಎಂಬ ಭ್ರಮೆಯ ಮದ ಬಿಡುವ
      ಅಸಂಖ್ಯಾತ ಸಮುದಾಯದ ಜನರ ಮನಸ್ಸಿನಲ್ಲಿ ನಾವೆಲ್ಲ ಲಿಂಗಾಯತ ಜಾತಿಯ ಪರಂಪರೆಯ ಅನುಸರಿಸುವ ಮೂಲಕ ನಾವೆಲ್ಲ ಒಂದಲ್ಲ ನೂರಾರು ವಿಶಿಷ್ಟವಾದ ದೇವರ ಉತ್ಸವ. ಮೂರ್ತಿಯ ಪೂಜೆಯ ಜೊತೆ ಲಿಂಗಾಯತ ಆರಾಧನೆ ಬಸವೇಶ್ವರ ಜಯಂತಿಯ ದಿನ ನಂದಿಯ ಉತ್ಸವ ಮೆರವಣಿಗೆಯ ಮೂಲಕ ವಾತ್ಸವ ವಾಗಿ ನಡೆಯುವುದು ಸತ್ಯ
      . “ಹಿಂದೂ.ಶೈವ. ಲಿಂಗಾಯತ ”
      ಈ ಗೊಂದಲ ಬೇಡ 1920-ರಿಂದ ಶಾಲೆಯ ದಾಖಲಾದ ಜಾತಿಯ ನಮೂನೆಯಲ್ಲಿ ತುಂಬ ಜನ
      ಧಾರ್ಮ- ಹಿಂದೂ-
      ಜಾತಿ-ಲಿಂಗಾಯತ
      ಉಪ ಜಾತಿಯ ನೋಂದಣಿ ಮಾಡದೇ ಎಲ್ಲರೂ ತಮ್ಮ ತಮ್ಮ ಮನೆಯ ಬದುಕಿನ ಕಾಯಕ ತತ್ವ ಪಾಲನೆಯ ಮೂಲಕ ಒಡಕು ಭಾರದ ರೀತಿಯ ಸಹಕಾರ ಜೀವನ ನಡೆಸುತ್ತಿರುವುದು ಸಹಜ
      ಸ್ವಾತಂತ್ರ್ಯ ನಂತರ ಸರ್ಕಾರ ಉಪಯೋಗ ಪಡೆಯುವ ಉದ್ದೇಶದಿಂದ ಉಪಜಾತಿ ಹೆಚ್ಚಾಗಿ
      ರಾಜಕಾರಣ ಮಾಡುವ ಉದ್ದೇಶದಿಂದ ಅವರನ್ನ ವೈಭವಿಕರಿಸುವ ಸಲುವಾಗಿನ ಮಠಗಳ ಸಂಖ್ಯೆಯಲ್ಲಿನ ಹೆಚ್ಚಳ
      ಖಾದಿ ಮತ್ತು ಖಾವಿ ಜನರಲ್ಲಿ ಆಧಿಪತ್ಯ ಸಾಧಿಸಿದೆ
      ಇನ್ನಾದರೂ ಭೇದ ಭಾವನೆ ಬೇಡ ಸಂಘಟನೆಯ ಹೊರತಾಗಿ ಸಂಗಜೀವಿಯಾಗಿ ಬದುಕಿನ ಕಾಯಕ ಮಾಡುವ ಎಲ್ಲರಿಗೂ ಧನ್ಯವಾದ ನಮಸ್ಕಾರ

  • ಸರಿಯಾಗೇ ಉಗಿಯಿರಿ ಅವನಿಗೆ ಒಬ್ಬ ಉನ್ನತ ಅಧಿಕಾರಿಯಾಗಿ ನಿವೃತ್ತಿ ಆದರೂ ಬುದ್ದಿ ಬಂದಿಲ್ಲ
    ನಿವೃತ್ತ ಅಧಿಕಾರಿ ಅಂತಾ ಗೌರವ ಕೊಟ್ಟರೆ ಅದನ್ನ ಅವರು ನನ್ನಷ್ಟು ಬುದ್ದಿವಂತ ಯಾರು ಇಲ್ಲಾ ಅಂತಾ ಅನ್ಕೊಂಡಿದ್ದಾರೆ

    • ಶಂಕರ ಬಿದರಿಯವರಲ್ಲಿ ಒಂದು ಕಳಕಳಿಯ ಮನವಿ ಮಾಡಿತ್ತೇನೆ, ಬಸವಣ್ಣನವರ ವಚನ ಹೇಳುತ್ತದೆ, ಸತ್ಯ ವಚನವ ನುಡಿಯಬಲ್ಲಡೆ ಶರಣ ನೆಂಬೆನು ಎಂದು, 12ನೇ ಶತಮಾನದಿಂದೀಚೆ ವಚನ ಸಾಹಿತ್ಯದ ಮೇಲೆ ಸಾಕಷ್ಟು ಪ್ರಹಾರಗಳು ನಡೆದಿವೆ ಆದರೆ ವಚನಗಳುಅಮರ ಗಣಂಗಳ ಹೃದಯದಲ್ಲರಳಿದ ಅನುಭಾದ ದೇವವಾಣಿಗಳು, ಅವುಗಳನ್ನು ಕೆಣಕಿದವರು ಸರ್ವನಾಶ ಆಗಿದ್ದಾರೆ, ವಚನ ಸಹಿತ್ಯ ಉಳಿದಿದೆ ಎಂದಿಗೂ ಉಳಿಯುತ್ತದೆ, ಯಾರೋ ಪಟ್ಟಭದ್ರ ಹಿತಾಸಕ್ತಿಗಳ ಮಾತಿಗೊಳಗಾಗಿ ಅತ್ಯಂಥ ಜವಾಬ್ದಾರಿ ಸ್ಥಾನದಲ್ಲಿರುವ ತಾವು ವಚನಗಳ ಅಂತರಂಗವನ್ನು ಶರಣರ ನಿಜ ಕಳಕಳಿಯನ್ನು ಆತ್ಮ ಸಾಕ್ಷಿಯಿಂದ ಅರ್ಥಮಾಡಿಕೊಳ್ಳಬೇಕು, ಬಸವಾದಿ ಶರಣರ ನಿಲುವುಗಳನ್ನು ಎತ್ತಿ ಹಿಡಿಯಿರಿ, ಸಮಾಜಘತುಕರ ಕುತಂತ್ರವಲ್ಲ.

  • ಎಲ್ಲಾ ವಿಷಯಗಳು ಎಲ್ಲರಿಗೂ ತಿಳಿದಿರಬೇಕು ಎಂದಿಲ್ಲ. ಬಿದರಿಯವರು ಕೂಡಾ ನಮ್ಮ ಸಮಾಜದ ಗೌರವಾನ್ವಿತ ಸಾತ್ವಿಕ ವ್ಯೆಕ್ತಿ. ನೀವು ಉತ್ತರಿಸುವ ಪರಿ ನೋಡಿದರೆ ಸುಸಂಸೃತ ಸಮಾಜ ತಲೆ ತಗ್ಗಿಸಬೇಕು. ಛೇ. .

    • Dived and rule polici .why don’t understand this, lingayath and veerashaiva lingayath,please understand this situation

  • ವೀರಶೈವ ನೇ ಬೇರೆ ಲಿಂಗಾಯತ ನೇ ಬೇರೆ ಎರಡು ವಿಭಿನ್ನ ಆದ್ರೆ ಬಿದರಿ ಅವರು ಆಗಲಿ ಇನ್ನುಳಿದ ಶೈವ ಪಂಥದ ಮನಸ್ಥಿತಿಯುಳ್ಳವರು ಹೆಸರಿಗೆ ಲಿಂಗಾಯತ ಅಂತ ಹೇಳಿಕೊಂಡು ಲಿಂಗಾಯತ ಮತ್ತು ಬಸವಣ್ಣನವರನ್ನು ಮರೆ ಮಾಚುವ ಹುನ್ಯಾರ್ ಮಾಡುತ್ತಿದ್ದಾರೆ. ಒಂದು ಸ್ಪಷ್ಟವಾಗಿ ತಿಳ್ಕೊಂಡು ಇರಬೇಕು ಲಿಂಗಾಯತರ ಆಚರಣೆ, ನಿಯಮ ಬೇರೆ ವೀರಶೈವರ ಆಚರಣೆ ನಿಯಮ ಬೇರೆ ಬೀದರ ಜಿಲ್ಲೆಯಲ್ಲಿ ಲಿಂಗಾಯತ ಅಂತ ಹೇಳೋರು ಎಲ್ಲರೂ 90% ವೀರಶೈವರೆ ಇದ್ದಾರೆ. ನೆನಪಿರಲಿ 12ನೇ ಶತಮಾನದಲ್ಲಿ ಈ ನಕಲಿ ಲಿಂಗಾಯತರಿಂದನೇ ಕ್ರಾಂತಿ ಆಗಿದ್ದು

  • ಈಗ ಈ ನಕಲಿ ಲಿಂಗಾಯತ ಬಿದರಿಯವರಿಂದ ಆಗುವುದು ಇದೆ.. ಕಾರ್ಯ, ಕೆಲಸ..ಶರಣರೇ…..?.. ಬಸವಣ್ಣನವರ , ಮತ್ತು ವಚನಗಳ…ವಿರೋಧಿಗಳ ಜೊತೆ ಇವರು ಕೈಜೋಡಿಸಿದ್ದಾರೆ…. ಆದ್ದರಿಂದ ಇವರನ್ನು ನಂಬುವುದು ಅರ್ಥ ಹೀನ ರಹಿತ ಸಂಧರ್ಭ ಹಾಗೂ ಸನ್ನಿವೇಶ ,ಪ್ರಸಂಗ ಸರ್… ಶರಣು ಶರಣಾರ್ಥಿಗಳು

  • ಲಿಂಗಾಯತ ಅನ್ನೋ ಬಸವಣ್ಣನವರ ಧರ್ಮ ಮತ್ತು ತತ್ವ ಸಿದ್ಧಾಂತವನ್ನು ಇತ್ತೀಚಿನ ದಿನಗಳಲ್ಲಿ ವೀರಶೈವ ರ ಅಡಿ ಆಳಾಗಿ ಮಾಡುತ್ತಾ ಇರುವುದು ಲಿಂಗಾಯತ ಸಮುದಾಯದ ರಾಜಕಾರಣಿಗಳು ವೀರ ಶೈವ ಬೇರೆ ಬಸವಣ್ಣನವರ ಲಿಂಗಾಯತ ಬೇರೆ. ಇಲ್ಲಿ ವೀರಶೈವರು ತುಂಬಾ ಬುದ್ದಿವಂತರು ಲಿಂಗಾಯತರನ್ನ ಕುರಿಗಳನ್ನಾಗಿ ಮಾಡಿ ತಮಗೆ ಬೇಕಾದಾಗೆ ಇತಿಹಾಸವನ್ನು ತಿರುಚುತ್ತಿದ್ದಾರೆ ಮತ್ತು ಬಸವಣ್ಣ ಅನ್ನುವ ಹೆಸರನ್ನೇ ಅಳಿಸಿಹಾಕುವ ಪ್ರಯತ್ನ ತುಂಬಾ ದಿನಗಳಿಂದ ನೆಡದಿದೆ ಕಾರಣ ಬಸವಣ್ಣನ್ನು ಲಿಂಗಾಯತರ ಮನಸ್ಸಿನಿಂದ ಹೊರಗಡೆ ಹಾಕಿದರೆ ಮುಂದೆ ವೀರ್ಶೈವರು ಯಾರನ್ನ ಹೇಳ್ತಾರೋ ಅವರೇ ಶ್ರೇಷ್ಟ್ ಎಂದು ಒಪ್ಪಿಕೊಳ್ಳುವ ಮನಸ್ಥಿತಿಯು ಲಿಂಗಾಯತರಲ್ಲಿ ಬಂದಾಗಿದೆ ಇತ್ತೀಚಿನ ದಿನಗಳಲ್ಲಿ ನಮ್ಮ ಲಿಂಗಾಯತರು ತಮ್ಮ ಬುದ್ದಿ ಶಕ್ತಿ ಯನ್ನು ವೀರ ಶೈವರಿಗೆ ಜೀತಕ್ಕೆ ಬಿಟ್ಟಂಗ ಆಗಿದೆ. ನಮ್ಮ ವಿಬೂತಿ ಧರ್ಮ ಬಸವಣ್ಣನವರನ್ನು ಯಾವತ್ತೂ ಮರೆತು ವೀರಶೈವರು ಹೇಳುವ ಹಾಗೆ ಕೇಳುತ್ತಾರೋ ಅವತ್ತಿಂದ ಬಸವಣ್ಣನವರನ್ನ ಮತ್ತೊಮ್ಮೆ ಗಡಿಪಾರು ಮಾಡಿ ಈ ಬಾರಿ ಪರದೇಶಕ್ಕೆ ಗಡಿಪಾರು ಮಾಡುತ್ತಾರೆ ಇದು ಸತ್ಯ

    • ಪಂಚಾಕ್ಷರಿಯವರೆ ನಿಮ್ಮ ವಾದ ಸರಾಯಾದೆ. ಜೈ ಬಸವೇಶ

    • ಡಾ. ಪಂಚಾಕ್ಷರಿ ಅವರ ನಿಲುವು ಮೆಚ್ಚುವಂತಹದ್ದು.

  • ಲೆ ಕರ್ನಲ್ ರಾಜಶೇಖರ ಪಾಟೀಲ್
    ನಮಗೆ 771 ಘನಂಗಳು ತಮ್ಮ ಜನ್ಮ ದಿನವನ್ನು ಆಚರಿಸಲೇಬೇಕೆಂಬ ಒತ್ತಾಯವೇನು ಮಾಡಿಲ್ಲ. ಅವರ ಕೊಡುಗೆ ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ನೆನಪಿಸುವುದೇ ಆ ದಿನದ ಕರ್ತವ್ಯ. ಹಾಗಾಗಿ ಈ ಶರಣರು ಬೇರೆ ಬೇರೆ ಸಂಜಾ ಪಂಗಡಗಳಿಂದ ಬಂದಿರುವುದರಿಂದ, ಜಯಂತಿಯನ್ನು, ಆಯಾ ದಿನವೇ ಆಚರಿಸುವುದು ಸೂಕ್ತ.

  • ಶರಣರಿಗೆ ಶರಣು ಶರಣಾರ್ಥಿಗಳು
    ಬಸವಾದಿ ಶರಣರ ತತ್ವಗಳನ್ನು ಪ್ರಚಾರ ಪಡಿಸಿದಂತ ಹಳಕಟ್ಟೆ ಲಿಂಗಾನಂದ ಅಪ್ಪಾಜಿ ಮಾತಾಜಿ ಭಾಲ್ಕಿಪಟ್ಟದೇವರು ಹಾಗೂ ಇನ್ನಿತರರು ಇಂಥವರ ಸಾಲಿಗೂ ಕೂಡ ಸೇರಿದ ರೇಣುಕಾಚಾರ್ಯರ ನು 770 ಅಮರ ಗಣಂಗಳ ಸಾಲಿನಲ್ಲಿ ಕೂಡಿಸಲು ಹೊರಟಿರುವುದು ವಿಷಾದಕರ ಸಂಗತಿ ವಚನ ಸಾಹಿತ್ಯ ವೈಜ್ಞಾನಿಕ ತಳಹದಿಯಮೇಲೆ ರಚನೆಯಾದಂತಹ ಸಾಹಿತ್ಯವಾಗಿದೆ ಮನಗಾಣಿರಿ

  • ರೇಣುಕಾ ಚಾರ್ಯರ ಜಯಂತಿಯನ್ನು ಬಸವ ಜಯಂತಿಯೊಂದಿಗೆ ತಳುಕು ಹಾಕುವುದು ಅಕ್ಷಮ್ಯ ಅಪರಾಧ. ಇದರ ವಿರುದ್ಧ ಬಸವ ಭಕ್ತರೆಲ್ಲ ನಿರಂಕುಶ ಅಧಿಕಾರಿಯಂತೆ ವರ್ತಿಸುವ ಶಂಕರ್ ಬಿದರಿಯವರನ್ನು ಲಿಂಗಾಯತರಿಂದ ದೂರವಿಡಿ ಮುಂದೆ ಇಂತಹ ವ್ಯಕ್ತಿಗಳಿಂದ ಬಸವ ತತ್ವ ನಾಶಕ್ಕೆ ನಾoದಿಯಾದಿತು

  • We are Hindus first and Sanatani followed by rest of the celebrations
    Basavananavar vichar unity of all and respect for all with harmony in community and society
    Vishwa ondu samaaj

Leave a Reply

Your email address will not be published. Required fields are marked *