ಡಾ ರಾಜ್​ಕುಮಾರ್ ವೀರಪ್ಪನಿಗೆ ವಚನ ಪಾಠ ಮಾಡುವ ವಿಡಿಯೋ ವೈರಲ್

ಬಸವ ಮೀಡಿಯಾ
ಬಸವ ಮೀಡಿಯಾ

ಡಾ ರಾಜ್​ಕುಮಾರ್ ವೀರಪ್ಪನಿಗೆ ವಚನ ಪಾಠ ಮಾಡುವ ಹಳೇ ವಿಡಿಯೋ ಮತ್ತೆ ವೈರಲ್ ಆಗಿದೆ.

ಸುಮಾರು 25 ವರ್ಷಗಳಷ್ಟು ಹಳೆಯ ವಿಡಿಯೋ ಆದರೂ, ಅದನ್ನು ನೋಡುವ ಜನರ ಸಂಖ್ಯೆ ಕಡಿಮೆಯಾಗಿಲ್ಲ.

2000ನೇ ಇಸವಿಯ ಜುಲೈ 30ರಂದು ರಾಜ್​ಕುಮಾರ್​ ಅವರನ್ನು ವೀರಪ್ಪನ್​ ಅಪಹರಣ ಮಾಡಿದ. ವೀರಪ್ಪನ್​ ಜೊತೆ 108 ದಿನಗಳನ್ನು ಅಣ್ಣಾವ್ರು ಕಳೆದರು.

ಆ ಸಂದರ್ಭದಲ್ಲಿ ರಾಜ್​ಕುಮಾರ್ ‘ನೂರನೋದಿ ನೂರ ಕೇಳಿದರೇನು? ಆಸೆ ಹರಿಯದು, ರೋಷ ಬಿಡದು. ಮಜ್ಜನಕ್ಕೆರೆದು ಫಲವೇನು? ಮಾತಿನಂತೆ ಮನವಿಲ್ಲದ ಜಾತಿಡೊಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವ’ ವಚನವನ್ನು ವೀರಪ್ಪನ ಮತ್ತು ಸಹಚರರಿಗೆ ವಿವರಿಸಿ ಹೇಳಿದ್ದರು.

ಈ ಸಾಲುಗಳನ್ನು ತಮಿಳಿಗೂ ಭಾಷಾಂತರ ಮಾಡಿ ವಿವರಿಸಿದ್ದರು. ಅಣ್ಣಾವ್ರಿಗೆ ಬಸವಣ್ಣನ ವಚನಗಳು ಎಷ್ಟು ಕಂಠಪಾಠ ಆಗಿದ್ದವು ಎಂದು ವಿಡಿಯೋ ನೋಡಿದರೆ ಗೊತ್ತಾಗುತ್ತದೆ.

Share This Article
Leave a comment

Leave a Reply

Your email address will not be published. Required fields are marked *