ಸುಳ್ಳು ಆರೋಪಕ್ಕೆ ಕುಗ್ಗದೆ ಹೋರಾಟ ಗಟ್ಟಿಗೊಳಿಸಲು ಒಕ್ಕೂಟದ ಕರೆ
ಭಾಲ್ಕಿ
ಗದಗಿನ ತೋಂಟದಾರ್ಯ ಮಠದ ಪೂಜ್ಯ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳ ಮೇಲೆ ಕನ್ನೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿ ಹನ್ನೆರಡು ತೊಲೆ ಬಂಗಾರ ತಮ್ಮ ಪೂರ್ವಾಶ್ರಮದ ಸಂಬಂಧಿಕರ ಮದುವೆಯಲ್ಲಿ ನೀಡಿದ್ದಾರೆಂಬುದು ಹಸಿಸುಳ್ಳು. ಈ ಆರೋಪ ಮಾಡುವ ಮೂಲಕ ಅವರ ಸಿದ್ಧರಾಮ ಮಹಾಸ್ವಾಮಿಗಳ ಚಾರಿತ್ರ್ಯಹನನ ಮಾಡಿರುವುದನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ತೀವ್ರವಾಗಿ ಖಂಡಿಸಿದ್ದಾರೆ.
ರಾಜ್ಯಾದ್ಯಂತ ಗದಗ ಶ್ರೀಗಳ ನೇತೃತ್ವದಲ್ಲಿ ಬಸವ ಸಂಸ್ಕೃತಿ ಅಭಿಯಾನ ಅದ್ದೂರಿಯಾಗಿ ಯಶಸ್ವಿ ಆಗಿರುವುದು ಕನ್ನೇರಿ ಸ್ವಾಮಿಗಳ ನಿದ್ದೆ ಕೆಡಿಸಿದೆ. ಹಾಗಾಗಿ ಅವರು ತಮ್ಮ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಬಾಯಿಗೆ ಬಂದಂತೆ ಬಡಬಡಿಸುತ್ತಿದ್ದಾರೆ. ಅವರು ಸೈದ್ಧಾಂತಿಕ ಹೋರಾಟವನ್ನು ಬಿಟ್ಟು ವೈಯಕ್ತಿಕವಾಗಿ ಸುಳ್ಳು ಆರೋಪ ಮಾಡುವಷ್ಟು ಕೆಳಮಟ್ಟಕ್ಕೆ ಇಳಿದು ತೊಟ್ಟ ಕಾವಿ ಬಟ್ಟೆಗೆ ಅವಮಾನಿಸುತ್ತಿದ್ದಾರೆ.
ಬಸವತತ್ವ ಪರವಾಗಿ ಗಟ್ಟಿಯಾಗಿ ನಿಂತಿರುವ ಪೂಜ್ಯರು ಹಾಗೂ ನಾಯಕರನ್ನು ಗುರಿಯಾಗಿ ಇಟ್ಟುಕೊಂಡು ಅವರ ಕುರಿತು ಅನೇಕ ಸುಳ್ಳಿನ ಕಟ್ಟು ಕಥೆಗಳನ್ನು ಹೆಣೆಯುವ ಕನ್ನೇರಿ ಸ್ವಾಮಿ ಸುಳ್ಳಿನ ಸರದಾರರಾಗಿದ್ದಾರೆ. `ಸತ್ಯಂ ವದ ಧರ್ಮಂ ಚರ’ ಎಂದು ಉಪದೇಶ ಮಾಡುವ ಸಂಸ್ಕೃತಿಯ ಕನ್ನೇರಿ ಸ್ವಾಮಿ ಬಾಯಿ ಬಿಚ್ಚಿದಾಗ ಒಂದು ಸುಳ್ಳು ಮಾತನಾಡುವ ಚಾಳಿ ಮಾಡಿಕೊಂಡಿದ್ದಾರೆ.
ಗದಗಿನ ತೋಂಟದಾರ್ಯ ಮಠ ಹಾಗೂ ನಾಗನೂರಿನ ರುದ್ರಾಕ್ಷಿ ಮಠದ ಪೂಜ್ಯರು ತಮ್ಮ ಪೂರ್ವಾಶ್ರಮದ ಸಂಬಂಧಿಕರಿಂದ ಸಾವಿರ ಸಾವಿರ ಕಿಲೋ ಮೀಟರ್ ದೂರ ಉಳಿದಿದ್ದಾರೆ. ಅವರು ಎಂದೂ ಪೂರ್ವಾಶ್ರಮದ ಸಂಬಂಧಿಕರನ್ನು ಶ್ರೀಮಠದ ಸಮೀಪ ಸುಳಿಯಲು ಅವಕಾಶ ನೀಡಿಲ್ಲ.
ಶ್ರೀಮಠದ ಭಕ್ತರ ಎಲ್ಲ ಕಾರ್ಯಗಳಲ್ಲಿ ಭಾಗಿಯಾಗುವುದು ಜಂಗಮ ಕಾರ್ಯ, ಆದರೆ ಅದಕ್ಕೆ ಸುಳ್ಳಿನ ಬಣ್ಣ ಹಚ್ಚಿ ಗದಗ ಶ್ರೀಗಳ ವೈಯಕ್ತಿಕ ಚಾರಿತ್ರ್ಯ ಹಾಳು ಮಾಡಲು ಪ್ರಯತ್ನಿಸುತ್ತಿರುವುದು ಅತ್ಯಂತ ನೀಚತನವಾಗಿದೆ.
ಗದುಗಿನ ಮಠ ಬಸವತತ್ವದ ಗಟ್ಟಿ ಧ್ವನಿಯಾಗಿದೆ. ಹಿಂದಿನ ಜಗದ್ಗುರುಗಳು ನಾಡು, ನುಡಿ, ಕೃಷಿ, ಸಾಹಿತ್ಯ, ಸಂಸ್ಕೃತಿ, ಪರಿಸರ ಮತ್ತು ಸಾಮಾಜಿಕ ಸೌಹಾರ್ದತೆಗೆ ಹೆಸರುವಾಸಿಯಾದವರು. ಅದೇ ಪರಂಪರೆಯನ್ನು ಇಂದಿನ ಜಗದ್ಗುರುಗಳಾದ ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ.
ಅವರ ಮೇಲೆ ಸುಳ್ಳು ಆರೋಪ ಮಾಡುವುದೆಂದರೆ ಬಸವತತ್ವ ಗಟ್ಟಿಯಾಗಿ ನಂಬಿದ ಎಲ್ಲ ಪೂಜ್ಯರ ಹಾಗೂ ಬಸವಭಕ್ತರ ಮೇಲೆ ಸುಳ್ಳುತನ ಹೇರಿದ ಹಾಗೆ ಆಗುತ್ತದೆ. ಅದಕ್ಕಾಗಿ ಕನ್ನೇರಿ ಶ್ರೀಗಳ ಈ ಸುಳ್ಳುದಾರಿಯ ನಡೆಯನ್ನು ಎಲ್ಲ ಬಸವಪರ ಸಂಘಟನೆಗಳು ತೀವ್ರವಾಗಿ ಖಂಡಿಸಬೇಕು.
ಕನ್ನೇರಿ ಸ್ವಾಮಿಗಳು ಲಿಂಗಾಯತ ಮಠಾಧೀಶರ ಹಾಗೂ ಸಮಾಜದ ಮೇಲೆ ಸುಳ್ಳು ಆರೋಪ ಮಾಡುವುದು ಇದೇ ರೀತಿ ಮುಂದುವರೆಸಿದರೆ ಸಮಾಜ ಅವರಿಗೆ ತಕ್ಕ ಪಾಠ ಕಲಿಸುತ್ತದೆ. ಕನ್ನೇರಿ ಸ್ವಾಮಿ ಲಿಂಗಾಯತ ಹೋರಾಟದ ಮುಂಚೂಣಿಯಲ್ಲಿದ್ದ ಮಠಾಧೀಶರ ಮೇಲೆ ವೈಯಕ್ತಿಕ ಸುಳ್ಳು ಆರೋಪಗಳನ್ನು ಮಾಡಿ ಹೆದರಿಸುವ ಮೂಲಕ ಈ ಹೋರಾಟದ ದಿಕ್ಕು ತಪ್ಪಿಸಬೇಕೆಂದು ಕನಸು ಕಾಣುತ್ತಿದ್ದಾರೆ.
ಅದು ಎಂದಿಗೂ ನನಸಾಗುವುದಿಲ್ಲ. ಇಂದು ಸಮಾಜ ಜಾಗೃತವಾಗಿದೆ. ತಮ್ಮ ಶತ್ರುಗಳು ಯಾರು? ಮಿತ್ರರು ಯಾರು? ಎಂದು ತಿಳಿದುಕೊಂಡಿದೆ. ಹಾಗಾಗಿ ಸುಳ್ಳುಗಾರಿಕೆಗೆ ಯಾರು ಮೋಸ ಹೋಗುವುದಿಲ್ಲ. ಇಂತಹ ಸುಳ್ಳು ಆರೋಪಗಳಿಂದ ಯಾರೂ ಕುಗ್ಗದೆ ಜಗ್ಗದೆ ಈ ಹೋರಾಟ ಮತ್ತಷ್ಟು ಗಟ್ಟಿಗೊಳಿಸಿ ಅವರಿಗೆ ತಿರಗೇಟು ನೀಡುವ ಮೂಲಕ ಅವರ ಹೊಲಸುಬಾಯಿ ಮುಚ್ಚಿಸಬೇಕಾಗಿದೆ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಪೂಜ್ಯ ಶ್ರೀ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ಕೇವಲ ಹೇಳಿಕೆ ಸಾಲದು? ಲಿಂಗಾಯತ ಧರ್ಮದ ಮತ್ತು ಮಠಗಳ ಇತಿಹಾಸಕ್ಕೆ ಕಳಂಕತಂದು ಸಮುದಾಯದಲ್ಲಿ ಗೊಂದಲ ಸೃಷ್ಟಿಸುವ ದುರುಧ್ದೇಶ ಆವರದು. ಈಗ ಮಠಾಧೀಶರು ಇನ್ನೂ ಒಗ್ಗಟ್ಟಾಗಿ ಕಠಿಣಕ್ರಮಕ್ಕೆ ಮುಂದಾಗ ಬೇಕು. ಇಲ್ಲವಾದರೆ ಇನ್ನಷ್ಟು ಸುಳ್ಳು ಸೃಷ್ಟಿಸಿ ಬಹಿರಂಗವಾಗಿ ಇಯಾಳಿಸುತ್ತಾರೆ. ಇದು ಕನ್ನೇರಿ ಕಾಡುಸಿದ್ದೇಶ್ವರರು ಮೇಲ್ನೋಟಕ್ಕೆ ಮಾತ್ರ, ಇದರ ಹಿಂದೆ ಅಸಂಖ್ಯಾತ ಪ್ರಬಲ ಶಕ್ತಿಗಳ ವ್ಯವಸ್ಥಿತ ಜಾಲವಿದೆ. ಕೂಡಲೆ ಒಕ್ಕೂಟವು ಎಲ್ಲಾ ಲಿಂಗಾಯತ ಸಂಘಟನೆಗಳ ವಿಶ್ವಾಸದೊಂದಿಗೆ ತುರ್ತು ಸಭೆನಡೆಸಿ ಮುಂದಿನ ನಡೆಗಳನ್ನು ತೀರ್ಮಾನಿಸಿ ಕಾರ್ಯಪ್ರವುತ್ತರಾಗಬೇಕು.
🥹👍💐
ಒಂದು ಬಾರಿ ನಡೆದ ಬಸವ ಸಂಸ್ಕ್ರತಿ ಅಭಿಯಾನದಿಂದ ಕನೇರಿ ಸ್ವಾಮಿ ಮತ್ತವರ ಹಿಂದಿರುವ ಶಕ್ತಿಗಳು ನರಳಾಡಿವೆ, ನಾವು ಪ್ರತಿ ವರ್ಷ, ಪ್ರತಿ ತಿಂಗಳೂ, ಪ್ರತಿ ದಿನವೂ ಬಸವ ಶಕ್ತಿಯನ್ನು ಬಸವ ಸಂಸ್ಕ್ರತಿ ಯನ್ನು ಪ್ರಸಾರ ಮಾಡುವ ಪಣ ತೊಡೋಣ , ಇಂತಹ ಲಕ್ಷ ಲಕ್ಷ ಕನೇರಿಯಂತಹ ವಿಕ್ರತ ಮನಸ್ಸಿನವರನ್ನು ಬೆಂಬಲಿಸುವ ಎದುರಿಸುವ ಶಕ್ತಿ ನಮಗಿದೆ .