(ಅಪ್ರತಿಮ ಸಂಶೋಧಕ ಡಾ. ಎಂ ಎಂ ಕಲಬುರ್ಗಿ ಆಗಸ್ಟ್ 30, 2015ರಂದು ಹಂತಕರ ಗುಂಡಿಗೆ ಬಲಿಯಾದರು. ಈ ತಿಂಗಳು ಪೂರ್ತಿ ಬಸವ ಮೀಡಿಯಾ ಕಲಬುರ್ಗಿ ಅವರ ಸಂಶೋಧನೆ ಹಾಗೂ ಚಿಂತನೆಯನ್ನು ಸರಳ ಕನ್ನಡದಲ್ಲಿ ಪರಿಚಯ ಮಾಡಿಕೊಡಲಿದೆ. #ಕಲಬುರ್ಗಿಮಾಸ)
ಧಾರವಾಡ
ಉತ್ತರ ಭಾರತದಿಂದ ಬೌದ್ಧ, ಜೈನ, ಆಗಮಿಕ ಶೈವ, ವೈದಿಕ ಧರ್ಮಗಳು ಪ್ರಾಚೀನ ಕರ್ನಾಟಕಕ್ಕೆ ವಲಸೆ ಬಂದವು.
ವಲಸೆ ಬಂದ ಜೈನ, ವೈದಿಕ ಧರ್ಮಗಳ ಭಾಷೆ, ಸಾಹಿತ್ಯ ಕಾಡ್ಗಿಚ್ಚಿನಂತೆ ಹಬ್ಬಿದವು. ವೈದಿಕದ ಪ್ರಭಾವದಿಂದ ಒಂದು ಪುರೋಹಿತ ವರ್ಗವೂ ಸೃಷ್ಟಿಯಾಯಿತು.
ಮೂಲತಃ ಆರ್ಯರಾಗಿದ್ದ ವೈದಿಕರಿಗೆ ಕನ್ನಡ ಮಾತೃಭಾಷೆಯೆನಿಸಲಿಲ್ಲ. ಅವರಿಗೆ ಸಂಸ್ಕೃತ ತಮ್ಮ ಪವಿತ್ರ ಗ್ರಂಥಗಳನ್ನು ಬರೆಯುವ ದೇವ ಭಾಷೆಯಾದರೆ, ಕನ್ನಡ ಕೇವಲ ಆಡು ಭಾಷೆಯಾಯಿತು.
ವೈದಿಕರು ತಮ್ಮ ಧರ್ಮ, ಪುರಾಣಗಳನ್ನು ಪ್ರಚಾರ ಮಾಡಲು ಕೇವಲ ಭಾಷೆ, ಸಾಹಿತ್ಯ ಮತ್ತು ಸಿದ್ದಾಂತಗಳನ್ನು ಬಳಸಲಿಲ್ಲ. ನಮ್ಮ ನೆಲ, ನದಿ, ಬೆಟ್ಟ, ಕಾಡುಗಳನ್ನೂ ಬಳಸಿಕೊಂಡರು.
ಆರ್ಯರ ವೈದಿಕ ಧರ್ಮವನ್ನು ಬಸವಾದಿ ಶರಣರು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ತನ್ನದೇ ಸ್ವತಂತ್ರ ತತ್ವ, ಆಚರಣೆಗಳಿದ್ದ ಬಹುಸಂಖ್ಯಾತರ ಲಿಂಗಾಯತ ಧರ್ಮ ಸ್ಥಾಪಿಸಿದರು.
ಪ್ರವಾಹದಂತೆ ಬಂದ ಶರಣ ಚಳುವಳಿಯಲ್ಲಿ ವೈದಿಕತೆಯ ವರ್ಣ, ಜಾತಿ, ಲಿಂಗ ಬೇಧಗಳು ಕೊಚ್ಚಿ ಹೋದವು.
ಆರ್ಯ ಧರ್ಮಗಳ ಹಿಡಿತಕ್ಕೆ ಸಿಲುಕಿದ ಕನ್ನಡಿಗರು

ಪ್ರಾಚೀನ ಕರ್ನಾಟಕದಲ್ಲಿ ವ್ಯವಸ್ಥಿತ ಧರ್ಮವಿರಲಿಲ್ಲ ಕೇವಲ ವೃತ್ತಿಯಾಧಾರಿತ ಗುಂಪುಗಳಿದ್ದವು. ಉತ್ತರ ಭಾರತದಿಂದ ಬೌದ್ಧ, ಜೈನ, ಆಗಮಿಕ ಶೈವ, ವೈದಿಕ ಧರ್ಮಗಳು ಇಲ್ಲಿಗೆ ವಲಸೆ ಬಂದವು.
ಇಲ್ಲಿ ಪ್ರಾಬಲ್ಯ ಸಾಧಿಸಲು ಅವುಗಳ ನಡುವೆ ನಡೆದ ಸಂಘರ್ಷದಲ್ಲಿ ವೈದಿಕ ಧರ್ಮ ಜಯಗೊಳಿಸಿತು. ಬೌದ್ಧ ನಾಶವಾದರೆ, ಜೈನ ದುರ್ಬಲವಾಯಿತು, ಆಗಮಿಕ ಶೈವ ವೈದಿಕಕ್ಕೆ ಶರಣಾಯಿತು.
ನಮ್ಮ ರಾಜರು ಉತ್ತರ ಭಾರತವನ್ನು ರಾಜಕೀಯವಾಗಿ ವಿರೋಧಿಸಿದರೂ ಅದರ ಧರ್ಮ, ಸಂಸ್ಕೃತಿ, ಭಾಷೆಗಳನ್ನು ಒಪ್ಪಿಕೊಂಡು ಪೋಷಿಸಿದರು. ಇದರಿಂದ ಕನ್ನಡಿಗರು ಅವುಗಳ ಹಿಡಿತಕ್ಕೆ ಬಂದರು.
ವಲಸೆ ಧರ್ಮಗಳ ಬಸದಿ, ದೇವಸ್ಥಾನಗಳು ಇಲ್ಲಿ ಹಬ್ಬಿದವು. ಅವುಗಳ ತತ್ವ ಪ್ರಸಾರ ಮಾಡುವ ತೀರ್ಥಂಕರ ಪುರಾಣ, ರಾಮಾಯಣ, ಮಹಾಭಾರತ ಶಿಲ್ಪಗಳು ಈ ದೇವಾಲಯಗಳಲ್ಲಿ ಎದ್ದು ನಿಂತವು.
ವೈದಿಕದ ಪ್ರಭಾವದಿಂದ ಒಂದು ಪುರೋಹಿತ ವರ್ಗ ಸೃಷ್ಟಿಯಾಯಿತು. ತೆರಿಗೆ ಹಣದಲ್ಲಿ ಒಂದು ಪಾಲನ್ನು ದಾನವಾಗಿ ಪಡೆದು ಪ್ರಜೆಗಳನ್ನು ಶೋಷಿಸಲು ಅದು ರಾಜರ ಜೊತೆ ಕೈಜೋಡಿಸಿತು.
ವಲಸೆ ಧರ್ಮಗಳ ಜೊತೆ ವರ್ಣ ಜಾತಿ ವ್ಯವಸ್ಥೆಗಳೂ ಕೂಡ ಒಳ ಬಂದವು. 9ನೇ ಶತಮಾನದ ಹೊತ್ತಿಗೆಲ್ಲಾ ಇವು ಸಮಸ್ಯೆಯಾಗಿ ಬೆಳೆದು ನಿಂತಿದ್ದು ಜೈನ ಕೃತಿ ವಡ್ಡಾರಾಧನೆಯಲ್ಲಿ ಕಾಣುತ್ತದೆ.
(‘ವಚನ ಸಾಹಿತ್ಯ: ವೈದಿಕ ವಿರೋಧ ಮತ್ತು ಜಾತಿ ನಿರಸನ’ ಲೇಖನದಿಂದ ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೧.)
ಸಂಸ್ಕೃತದ ಹಬೆಯಲ್ಲಿ ನಲುಗಿದ ಕನ್ನಡ

ವಲಸೆ ಬಂದ ಜೈನ, ವೈದಿಕ ಧರ್ಮಗಳ ಭಾಷೆ, ಸಾಹಿತ್ಯ ಕಾಡ್ಗಿಚ್ಚಿನಂತೆ ಹಬ್ಬಿದವು. ತಮಿಳು ಕವಿಗಳು ಸಿಲಪ್ಪದಿಕಾರಂನಂತಹ ಸ್ಥಳೀಯ ಚರಿತ್ರೆ ಬರೆದರೆ, ಕನ್ನಡ ಕವಿಗಳು ಉತ್ತರದ ಕಥೆಗಳನ್ನೇ ಮತ್ತೆ ಮತ್ತೆ ಬರೆದರು.
ಜೈನ, ವೈದಿಕ ಕವಿಗಳು ರಾಮಾಯಣ, ಮಹಾಭಾರತ, ತೀರ್ಥಂಕರ ಪುರಾಣಗಳನ್ನು ಮಾತ್ರ ಬರೆದರು. ಪಂಚತಂತ್ರ, ಬಾಣ ಕಾದಂಬರಿಗಳಂತಹ ಲೌಕಿಕ ಸಾಹಿತ್ಯವೂ ಉತ್ತರದ ಅನುವಾದವಾಗಿತ್ತು.
ವಿರೋಧವನ್ನು ಲೆಕ್ಕಿಸದೆ ಒಳಬಂದ ವೈದಿಕರ ಭಾಷೆ ಸಂಸ್ಕೃತ ತನ್ನ ವ್ಯಾಕರಣ, ಛಂದಸ್ಸು, ನಿಘಂಟುಗಳನ್ನು ಕನ್ನಡದ ಮೇಲೆ ಹೇರಿತು. ತಾನೇ ಕನ್ನಡದ ತಾಯಿಯೆಂದು ಬಿಂಬಿಸಿತು.
ಮೂಲತಃ ಆರ್ಯರಾಗಿದ್ದ ವೈದಿಕರಿಗೆ ಕನ್ನಡ ಮಾತೃಭಾಷೆಯೆನಿಸಲಿಲ್ಲ. ಅವರಿಗೆ ಸಂಸ್ಕೃತ ತಮ್ಮ ಪವಿತ್ರ ಗ್ರಂಥಗಳನ್ನು ಬರೆಯುವ ದೇವ ಭಾಷೆಯಾದರೆ, ಕನ್ನಡ ಕೇವಲ ಆಡು ಭಾಷೆಯಾಯಿತು.
ಪ್ರಾಚೀನ ಜೈನ, ಲಿಂಗಾಯತ ಕವಿಗಳು ಕನ್ನಡದಲ್ಲಿ ಅಮೋಘವಾದ ಸಾಹಿತ್ಯ ಬರೆದರು. ಆದರೆ ವೈದಿಕರಲ್ಲಿ ಕುಮಾರ ವ್ಯಾಸ, ಲಕ್ಷ್ಮೀಶರಂತಹ ಮಹಾ ಕವಿಗಳು ಬಂದಿದ್ದು 15ನೇ ಶತಮಾನದಷ್ಟು ತಡವಾಗಿ.
ಶ್ರೀವೈಷ್ಣವರು 11ನೇ ಶತಮಾನದಲ್ಲಿ ಕರ್ನಾಟಕಕ್ಕೆ ಬಂದರೂ 17ನೇ ಶತಮಾನದತನಕ ಅವರು ಕನ್ನಡದಿಂದ ದೂರವುಳಿದರು. ಇದರಿಂದ ಕನ್ನಡ ತನ್ನ ನೆಲದಲ್ಲೇ ಮಲಮಗನಂತೆ ಬದುಕಬೇಕಾಯಿತು.
(‘ಕನ್ನಡಿಗರ ಮಾತೃ ಭಾಷಾ ಪ್ರಜ್ಞೆಯ ಇತಿಹಾಸ‘ ಲೇಖನದಿಂದ ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೧.)
ವೈದಿಕರು ನಮ್ಮ ಇತಿಹಾಸ ಅಳಿಸಿದರು
ವೈದಿಕರು ತಮ್ಮ ಧರ್ಮ, ಪುರಾಣಗಳನ್ನು ಪ್ರಚಾರ ಮಾಡಲು ಕೇವಲ ಭಾಷೆ, ಸಾಹಿತ್ಯ ಮತ್ತು ಸಿದ್ದಾಂತಗಳನ್ನು ಬಳಸಲಿಲ್ಲ. ನಮ್ಮ ನೆಲ, ನದಿ, ಬೆಟ್ಟ, ಕಾಡುಗಳನ್ನೂ ಬಳಸಿಕೊಂಡರು.
ಪ್ರಾಚೀನ ಕಾಲದಿಂದ ಬೆಳೆದು ಬಂದಿದ್ದ ಸ್ಥಳಗಳ ಇತಿಹಾಸ, ಹೆಸರು ಅಳಿಸಿ ಹಾಕಿದರು. ಅವುಗಳ ಬದಲು ತಮ್ಮ ಪುರಾಣಗಳೊಂದಿಗೆ ಸಂಬಂಧ ಕಲ್ಪಿಸುವ ಹೊಸ ಕಥೆ, ಹೆಸರು ಸೃಷ್ಟಿಸಿದರು.
17ನೇ ಶತಮಾನದವರೆಗೆ ಸವದತ್ತಿ ಎಲ್ಲಮ್ಮ ಒಬ್ಬ ಗ್ರಾಮ ದೇವತೆ. ನಂತರ ರೇಣುಕಾ-ಜಮದಗ್ನಿ ಪುರಾಣವನ್ನು ಅವಳ ಮೇಲೆ ಹೇರಲಾಯಿತು. ಮಂಡ್ಯ ಮಾಂಡವ್ಯ ಋಷಿಯ ನೆಲೆಯಾಯಿತು.
ಹಿರಿ ಹೊಳೆ ‘ಕೃಷ್ಣಾ ನದಿ’ಯಾಯಿತು, ಕರಿ ಹೊಳೆ ‘ಮಲಪ್ರಭೆ’ಯಾಯಿತು . ಸಿಕ್ಕಸಿಕ್ಕಲ್ಲಿ ಕಪಿಲಾ, ಕಣ್ವ ಆಶ್ರಮಗಳೆದ್ದವು ಅಥವಾ ರಾಮ, ಸೀತೆಯಂತಹ ಉತ್ತರ ಭಾರತದ ಪುರಾಣ ಪಾತ್ರಗಳು ಓಡಾಡಿದವು.
ಈ ಕಥೆಗಳು ಆರ್ಯ ಸಂಸ್ಕೃತಿಯಿಂದ ಬಂದ ವೈದಿಕರ ಪ್ರಾಬಲ್ಯ ಹೆಚ್ಚಿಸಿದವು. ಆದರೆ ಅವುಗಳನ್ನು ನಂಬಿ ತಮ್ಮ ನಿಜ ಇತಿಹಾಸ ಮರೆತ ಕನ್ನಡಿಗರು ತಮ್ಮ ಅಸ್ಮಿತೆಯನ್ನೂ ಕಳೆದುಕೊಂಡರು.
(‘ಕಳಲೆ ವೀರಶೈವ ಅರಸು ಮನೆತನ ವಿಚಾರ ಸಂಕಿರಣ ಅಧ್ಯಕ್ಷ ಭಾಷಣದಿಂದ’ ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)
ವೈದಿಕತೆಗೆ ಪರ್ಯಾಯವಾಗಿ ಹುಟ್ಟಿದ ಲಿಂಗಾಯತ ಧರ್ಮ

ಆರ್ಯರ ವೈದಿಕ ಧರ್ಮವನ್ನು ಬಸವಾದಿ ಶರಣರು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ತನ್ನದೇ ಸ್ವತಂತ್ರ ತತ್ವ, ಆಚರಣೆಗಳಿದ್ದ ಬಹುಸಂಖ್ಯಾತರ ಲಿಂಗಾಯತ ಧರ್ಮ ಸ್ಥಾಪಿಸಿದರು.
ಪ್ರವಾಹದಂತೆ ಬಂದ ಶರಣ ಚಳುವಳಿಯಲ್ಲಿ ವೈದಿಕತೆಯ ವರ್ಣ, ಜಾತಿ, ಲಿಂಗ ಬೇಧಗಳು ಕೊಚ್ಚಿ ಹೋದವು. ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ’ ಎಂದು ಹೇಳುವಷ್ಟು ಸಮತಾ ಭಾವನೆ ಬೆಳೆಯಿತು.
ವೈದಿಕ ಧರ್ಮದ ಅಸಂಖ್ಯಾತ ದೇವರುಗಳ ಬದಲು ಶರಣರು ಏಕದೇವೋಪಾಸನೆಯನ್ನು ಪ್ರತಿಪಾದಿಸಿದರು. ಇಷ್ಟಲಿಂಗ ಪೂಜೆಯ ಆಚರಣೆ ತಂದು ಕಲ್ಲಿನ ದೇಗುಲಗಳನ್ನುತಿರಸ್ಕರಿಸಿದರು.
ಸೋಹಂ ತತ್ವದ ಮೂಲಕ ಮೋಕ್ಷ ಸಂಪಾದನೆ ವೈದಿಕ ಧರ್ಮದ ಮುಖ್ಯ ದ್ಯೇಯ. ಇದಕ್ಕೆ ಪ್ರತಿಯಾಗಿ ಶರಣರು ಕಾಯಕ, ದಾಸೋಹಗಳ ಮೂಲಕ ಸಮಾಜಮುಖಿಯಾಗಿ ಬದುಕುವುದನ್ನು ಕಲಿಸಿದರು.
ಶರಣರು ಸಂಸ್ಕೃತದ ಬದಲು ಕನ್ನಡ, ಹಳಗನ್ನಡದ ಬದಲು ಜನಭಾಷೆ ನಡುಗನ್ನಡ ಬಳಸಿದರು. ಆರ್ಯರ ಪುರಾಣಗಳ ಬದಲು ಚನ್ನಯ್ಯ, ಅಕ್ಕರಂತಹ ಸ್ಥಳೀಯ ಮಹಾತ್ಮರ ಚರಿತ್ರೆ ಬರೆದರು .
900 ವರ್ಷದ ಇತಿಹಾಸದಲ್ಲಿ ಒಬ್ಬ ಶರಣ ಕವಿಯೂ ರಾಮಾಯಣ, ಮಹಾಭಾರತಗಳನ್ನು ಬರೆಯಲಿಲ್ಲ. ಬದಲಿಗೆ ಅವು ವಿದ್ಯೆಯಲ್ಲ, ಸೋದರ ವಧೆಯ ಕಥೆಯೆಂದು ಟೀಕಿಸಿ ದೂರವುಳಿದರು.
(‘ಲಿಂಗಾಯತ: ಕನ್ನಡಿಗರು ಸೃಷ್ಟಿಸಿದ ಕರ್ನಾಟಕದ ಮೊದಲ ಧರ್ಮ’
ಲೇಖನದಿಂದ ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭.)
ವೈದಿಕ ಸಂಸ್ಕೃತಿ ವಿರುದ್ಧ ಹೋರಾಡಿದ ಬಸವಣ್ಣ

ಆರ್ಯರ ವೈದಿಕ ಧರ್ಮವನ್ನು ಬಸವಾದಿ ಶರಣರು ತಿರಸ್ಕರಿಸಿದರು. ಅದಕ್ಕೆ ಪರ್ಯಾಯವಾಗಿ ತನ್ನದೇ ಸ್ವತಂತ್ರ ತತ್ವ, ಆಚರಣೆಗಳಿದ್ದ ಬಹುಸಂಖ್ಯಾತರ ಲಿಂಗಾಯತ ಧರ್ಮ ಸ್ಥಾಪಿಸಿದರು.
ಪ್ರವಾಹದಂತೆ ಬಂದ ಶರಣ ಚಳುವಳಿಯಲ್ಲಿ ವೈದಿಕತೆಯ ವರ್ಣ, ಜಾತಿ, ಲಿಂಗ ಬೇಧಗಳು ಕೊಚ್ಚಿ ಹೋದವು. ‘ಕುಲಕ್ಕೆ ತಿಲಕ ನಮ್ಮ ಮಾದಾರ ಚೆನ್ನಯ್ಯ’ ಎಂದು ಹೇಳುವಷ್ಟು ಸಮತಾ ಭಾವನೆ ಬೆಳೆಯಿತು.
ವೈದಿಕ ಧರ್ಮದ ಅಸಂಖ್ಯಾತ ದೇವರುಗಳ ಬದಲು ಶರಣರು ಏಕದೇವೋಪಾಸನೆಯನ್ನು ಪ್ರತಿಪಾದಿಸಿದರು. ಇಷ್ಟಲಿಂಗ ಪೂಜೆಯ ಆಚರಣೆ ತಂದು ಕಲ್ಲಿನ ದೇಗುಲಗಳನ್ನುತಿರಸ್ಕರಿಸಿದರು.
ಸೋಹಂ ತತ್ವದ ಮೂಲಕ ಮೋಕ್ಷ ಸಂಪಾದನೆ ವೈದಿಕ ಧರ್ಮದ ಮುಖ್ಯ ದ್ಯೇಯ. ಇದಕ್ಕೆ ಪ್ರತಿಯಾಗಿ ಶರಣರು ಕಾಯಕ, ದಾಸೋಹಗಳ ಮೂಲಕ ಸಮಾಜಮುಖಿಯಾಗಿ ಬದುಕುವುದನ್ನು ಕಲಿಸಿದರು.
ಶರಣರು ಸಂಸ್ಕೃತದ ಬದಲು ಕನ್ನಡ, ಹಳಗನ್ನಡದ ಬದಲು ಜನಭಾಷೆ ನಡುಗನ್ನಡ ಬಳಸಿದರು. ಆರ್ಯರ ಪುರಾಣಗಳ ಬದಲು ಚನ್ನಯ್ಯ, ಅಕ್ಕರಂತಹ ಸ್ಥಳೀಯ ಮಹಾತ್ಮರ ಚರಿತ್ರೆ ಬರೆದರು .
900 ವರ್ಷದ ಇತಿಹಾಸದಲ್ಲಿ ಒಬ್ಬ ಶರಣ ಕವಿಯೂ ರಾಮಾಯಣ, ಮಹಾಭಾರತಗಳನ್ನು ಬರೆಯಲಿಲ್ಲ. ಬದಲಿಗೆ ಅವು ವಿದ್ಯೆಯಲ್ಲ, ಸೋದರ ವಧೆಯ ಕಥೆಯೆಂದು ಟೀಕಿಸಿ ದೂರವುಳಿದರು.
(‘ಲಿಂಗಾಯತ: ಕನ್ನಡಿಗರು ಸೃಷ್ಟಿಸಿದ ಕರ್ನಾಟಕದ ಮೊದಲ ಧರ್ಮ’
ಲೇಖನದಿಂದ ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭.)
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LcykjUHphtT2VDkfrKC3PM
