ತುಮಕೂರು
“ಎಂ ಎಂ ಕಲ್ಬುರ್ಗಿರವರನ್ನು ಕೊಂದಾಗ ಚಿಮ್ಮಿದ್ದು ರಕ್ತವಲ್ಲ, ಬಸವಾದಿ ಶರಣರ ವಿಚಾರಧಾರೆಗಳು. ತಮ್ಮ ರಕ್ತದ ಕಣ ಕಣದಲ್ಲೂ ಬಸವತತ್ವ ಮೈಗೂಡಿಸಿಕೊಂಡಿದ್ದರು,” ಎಂದು ಕೈಗರಿಕೊದ್ಯಮಿ ಡಿ.ಬಿ. ಶಿವಾನಂದ ಹೇಳಿದರು.
ನಗರದಲ್ಲಿ ಶುಕ್ರವಾರ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಭಾರತೀಯ ಶರಣ ಸೇನೆಯಿಂದ ಹಮ್ಮಿಕೊಂಡಿದ್ದ ಸಂಶೋಧಕ ಎಂ.ಎಂ.ಕಲಬುರ್ಗಿ ಅವರ 9ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
12ನೇ ಶತಮಾನದ ವಚನ ಸಾಹಿತ್ಯದ ಸತ್ಯಾಂಶವನ್ನು ಬೆಳಕಿಗೆ ತಂದ ಎಂ ಎಂ ಕಲ್ಬುರ್ಗಿರವರ ಸಂಶೋಧನೆಯನ್ನು ಸಹಿಸದ ಮೂಲಭೂತವಾದಿಗಳು ಅವರನ್ನು ಗುಂಡಿಕ್ಕಿ ಕೊಂಡರು ಎಂದು JLM ಯುವ ಘಟಕದ ರಾಜ್ಯ ಸಂಚಾಲಕರು ಹಾಗೂ ಭಾರತೀಯ ಶರಣ ಸೇನಾ ತುಮಕೂರು ಘಟಕ ಸಂಚಾಲಕ ರಾಯಸಂದ್ರ ರವಿಕುಮಾರ್ ತಿಳಿಸಿದರು.
“ಕಲಬುರ್ಗಿಯವರನ್ನು ಕೊಂದಿರಬಹುದೇ ಹೊರೆತು ಅವರ ವಿಚಾರಗಳನ್ನಲ್ಲ, ಅವರು ಬಸವಣ್ಣನವರ ಹಾಕಿಕೊಟ್ಟ ಹಾದಿಯಲ್ಲಿ ಸಾಗುತ್ತಿದ್ದರು,” ಎಂದು ಹೇಳಿದರು.

ಕನ್ನಡ ಶಾಸನಗಳ ಹಾಗೂ ವಚನ ಸಾಹಿತ್ಯದ ಸಂಶೋಧನೆಗೆ ಶ್ರಮಿಸಿದ ಕಲಬುರ್ಗಿಯವರ ಕೊಡುಗೆಯನ್ನು ಶರಣಸೇನಾ ಸಂಚಾಲಕ ಹೆಚ್. ಎಲ್. ಕುಮಾರಸ್ವಾಮಿ ಸ್ಮರಿಸಿದರು.
ಐತಿಹಾಸಿಕ ದಾಖಲೆಗಳ ಸಮೇತ ಕನ್ನಡ ನೆಲದಲ್ಲಿ ಕಾಯಕ ಜೀವಿಗಳಿಂದ ಹುಟ್ಟಿದ ಲಿಂಗಾಯತ ಧರ್ಮವನ್ನು ಕಲಬುರ್ಗಿಯವರು ಶೋಧಿಸಿದರು. ಅವರ ವಿಚಾರಗಳನ್ನ ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರಬೇಕು ಎಂದರು.
“ಕಾಶ್ಮೀರ ಫೈಲ್ ಹೊರಬಂದಿದೆ. ಆದರೆ ಇದಕ್ಕೂ ಮುಖ್ಯವಾಗಿ ಸಮಾಜಕ್ಕೆ ಸತ್ಯ ತಿಳಿಯಬೇಕಾದರೆ ಬಸವಕಲ್ಯಾಣದ ಫೈಲ್ ಬರಬೇಕಿದೆ,” ಎಂದು ತುಮಕೂರು ವಿಶ್ವವಿದ್ಯಾನಿಲಯದ ಉಪನ್ಯಾಸಕ ಬಸವಲಿಂಗಯ್ಯ ಹೇಳಿದರು.
ಲಿಂಗಾಯತ ಧರ್ಮ ಉಳಿಯಬೇಕೆಂದರೆ ಮುಂದಿನ ದಿನಗಳಲ್ಲಿ ನಡೆಯುವ ಜಾತಿ ಹಾಗೂ ಜನಗಣತಿಯಲ್ಲಿ ಧರ್ಮ ಅಥವಾ ಜಾತಿಯ ಕಲಾಂ ನಲ್ಲಿ ಲಿಂಗಾಯತ ಎಂಬುದಾಗಿ ನಮೂದಿಸಿ ಎಂದು JLM ಜಿಲ್ಲಾಧ್ಯಕ್ಷ ನಾಗಭೂಷನ್ ಹೇಳಿದರು
ಯುವಕರು ಲಿಂಗಾಯತ ಧರ್ಮದ ವಿಚಾರಧಾರೆಗಳನ್ನು ಅಧ್ಯಯನ ಮಾಡಬೇಕು. ನಾನು ಲಿಂಗಾಯತ, ನನ್ನ ಧರ್ಮ ಲಿಂಗಾಯತ ಎಂದು ಎದೆ ತಟ್ಟಿ ಹೇಳಬೇಕು, ಎಂದು ಕರೆ ಕೊಟ್ಟರು.
ಈ ಸಂದರ್ಭದಲ್ಲಿ ರಾಜೇಶ್ವರಿ ಶಿವಾನಂದ, ಸಿದ್ದು ಬಿ.ಎಸ್. ಸೂರನಹಳ್ಳಿ, ಬಸವರಾಜು, ದೇವರಾಜು ಕೆ, ಅಭಿಷೇಕ್ ಹಿರೇಮಠ್, ಗೋಪಾಲಕೃಷ್ಣ, ಮತ್ತಿತರ ಭಾರತೀಯ ಶರಣಸೇನಾ ಸದಸ್ಯರು ಇದ್ದರು.