ಸವದತ್ತಿ:
ಬೆಳಗಾವಿ ಜಿಲ್ಲೆ, ಸವದತ್ತಿ ತಾಲೂಕಿನ ಮಲ್ಲೂರು ಗ್ರಾಮದ ಅನುಭವ ಮಂಟಪದಲ್ಲಿ ಇತ್ತೀಚಿಗೆ ಮೂರು ದಿನದ ಅವಿರಳ ಜ್ಞಾನಿ ಚನ್ನಬಸವಣ್ಣ ಶರಣರ “ಕರಣ ಹಸಿಗೆ” ಆಧಾರಿತ ತಾತ್ವಿಕ ಮತ್ತು ವೈಜ್ಞಾನಿಕ ಚಿಂತನ ಕಮ್ಮಟ ಯಶಸ್ವಿಯಾಗಿ ನಡೆಯಿತು.
ಪ್ರತಿವರ್ಷ ಜುಲೈ ತಿಂಗಳಿನಲ್ಲಿ ನಡೆಯುವ ಕಮ್ಮಟದಲ್ಲಿ ಬಸವಾದಿ ಶರಣರ ತಾತ್ವಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತನ ಮಂಥನ ಶಿಬಿರ ನಡೆಸಿಕೊಂಡು ಬರಲಾಗುತ್ತಿದೆ.











