ಬಸವ ಮೂರ್ತಿ ಮುಂದೆ ಆರೆಸ್ಸೆಸ್ ಗೀತೆ ಹಾಡಿರುವ ವಿವಾದಕ್ಕೆ ಬಂದಿರುವ ಪ್ರತಿಕ್ರಿಯೆ
ಬಸವ ಕಲ್ಯಾಣ
ಬಸವಣ್ಣನವರ ಮೂರ್ತಿ ಎದುರು ಆರೆಸ್ಸೆಸ್ ಪ್ರಾರ್ಥನಾ ಗೀತೆ ಹಾಡಿ ಅದರ ವಿಡಿಯೋ ವೈರಲ್ ಮಾಡುವುದು ಅವರ ಉದ್ದೇಶ. ಆ ಕಾರ್ಯಕ್ರಮದಲ್ಲಿ ಶಾಸಕರು ಸೇರಿದಂತೆ ಜಿಲ್ಲೆಯ ಬಿಜೆಪಿ ಮುಖಂಡರು ಭಾಗವಹಿಸಿದ್ದನ್ನು ತೋರಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ವೈದಿಕ ಸಂಪ್ರದಾಯ ಧಿಕ್ಕರಿಸಿ ಹೊರಬಂದು ಹೊಸ ಧರ್ಮ ಕಟ್ಟಿದವರು ಬಸವಣ್ಣ. ಈಗ ಅವರನ್ನು ಮತ್ತೆ ವೈದಿಕತೆಯ ತೆಕ್ಕೆಗೆ ತೆಗೆದುಕೊಳ್ಳುವ ಹುನ್ನಾರ ಆರೆಸ್ಸೆಸ್ ನಡೆಸಿದೆ. ಅದರ ಭಾಗವಾಗಿಯೇ ಈ ಪ್ರಯತ್ನ ನಡೆದಿದೆ. ಬಸವಾದಿ ಶರಣರ ಹೆಸರಿನ ಹಿಂದೂ ಸಮಾವೇಶ ನಡೆಸುತ್ತಿರುವುದೂ ಇದೇ ಕಾರಣಕ್ಕೆ.
ಇವರಿಗೆ ನೇರವಾಗಿ ಬಸವಣ್ಣನವರನ್ನು ವಿರೋಧಿಸಲು ಬರುವುದಿಲ್ಲ. ಅದಕ್ಕೆ ಬೇರೆ ಬೇರೆ ರೂಪದಲ್ಲಿ ಅವರನ್ನು ವೈದಿಕಕರಣಗೊಳಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಇದು 12ನೇ ಶತಮಾನದ ನಂತರದಿಂದಲೇ ನಡೆದು ಬಂದಿದೆ. ಈ ದಾರಿತಪ್ಪಿಸುವ ಕೆಲಸಗಳನ್ನು ರಾಷ್ಟ್ರೀಯ ಬಸವದಳ ತೀವ್ರವಾಗಿ ಖಂಡಿಸುತ್ತದೆ.
ನಾವು ಲಿಂಗಾಯತರಿಗೆ ಜಾಗೃತಿ ಮೂಡಿಸಬೇಕು. ಎಲ್ಲರಲ್ಲೂ ಈ ಹುನ್ನಾರದ ಅರಿವು ಮೂಡಿಸಬೇಕು. ಭಾರತ ಬಹು ಸಂಸ್ಕೃತಿಯ ದೇಶ ಅವರವರ ಸಂಸ್ಕೃತಿ ಆಚರಿಸಲು ಸಂವಿಧಾನಾತ್ಮಕವಾದ ಹಕ್ಕಿದೆ.
