ಯಣ್ಣಿವಡಿಗೇರಿಯ ಲಲಿತಾ ಮತ್ತು ಮಲ್ಲಿಕಾರ್ಜುನ ಗುಡಿಮನಿ ಅವರ ಪುತ್ರ ಜಿ. ಬಸವರಾಜ ಮತ್ತು ಸಂಗೀತ ಅವರ ಕಲ್ಯಾಣ ಮಹೋತ್ಸವವು ಜುಲೈ 8ರಂದು ವಿಜಯಪುರದ ಬಸವನಬಾಗೇವಾಡಿಯಲ್ಲಿ ಬಸವತತ್ವದ ಪ್ರಕಾರ ನಡೆಯಿತು. ಸಂಗೀತಾ ಅವರು ಕಡಕೋಳದ ರೇಣುಕಾ ಮತ್ತು ಲಿಂಗೈಕ್ಯ ಭೀಮಪ್ಪ ಅವರ ಪುತ್ರಿಯಾಗಿದ್ದಾರೆ.
ಬಸವ ಭವನದಲ್ಲಿ ನಡೆದ ಕಲ್ಯಾಣ ಮಹೋತ್ಸವದ ಸಾನಿಧ್ಯವನ್ನು ಇಲಕಲ್ಲ ವಿಜಯ ಮಹಾಂತೇಶ್ವರ ಮಠದ ಪೂಜ್ಯ ಡಾ. ಗುರುಮಹಾಂತಪ್ಪಗಳು ವಹಿಸಿದ್ದರು.






