ನಾಡಿನಲ್ಲಿ ಎಲ್ಲೆಡೆ ಬಸವ ಜಯಂತಿಯ ಸಂಭ್ರಮ

ಬಸವ ಮೀಡಿಯಾ
ಬಸವ ಮೀಡಿಯಾ
17Posts
Auto Updates

ಸಾಂಸ್ಕೃತಿಕ ನಾಯಕನ ಜನ್ಮದಿನವನ್ನು ಸಡಗರದಿಂದ ಆಚರಿಸುತ್ತಿರುವ ಬಸವ ಭಕ್ತರು

Contents
ಮುಂದಿನ ವರ್ಷ ಏಪ್ರಿಲ್ 20ಕ್ಕೆ ನೂತನ ಅನುಭವ ಮಂಟಪ ಲೋಕಾರ್ಪಣೆ: ಖಂಡ್ರೆಬಸವಣ್ಣನವರ ತತ್ವಗಳು ಸಮಾಜಕ್ಕೆ ದಾರಿದೀಪ: ಸಚಿವ ಶರಣಪ್ರಕಾಶ ಪಾಟೀಲಬಸವ ಪುತ್ಥಳಿಗೆ ಶಂಕುಸ್ಥಾಪನೆ, ಬೆಲ್ದಾಳ ಶರಣರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಿಎಂಭಾಲ್ಕಿ ರ‍್ಯಾಲಿಯಲ್ಲಿ ನೂರಾರು ಬೈಕ್, ಕಾರುಗಳುಕೊಪ್ಪಳದಲ್ಲಿ ಬಸವಾದಿ ಶರಣರ ವಚನಕಟ್ಟುಗಳ ಹೊತ್ತು ಜಾಥಾವಿಜಯಪುರದಲ್ಲಿ ಬಸವ ಜಯಂತಿ: ಮಹಿಳೆಯರ ಬೈಕ್ ರ‍್ಯಾಲಿಬಸವನಬಾಗೇವಾಡಿ: ಷಟ್‌ಸ್ಥಲಗಳು ವಚನಕಾರರ ಅನುಭಾವದ ಸಾರಜಹಿರಾಬಾದಿನಲ್ಲಿ ಬಸವತತ್ವಾಧಾರಿತ ರಸಪ್ರಶ್ನೆ ಕಾರ್ಯಕ್ರಮಬೆಳಗಾವಿಯಲ್ಲಿ ಸಮಾನತೆ ಸಂದೇಶ ಸಾರಿದ ಬೃಹತ್ ಬೈಕ್ ರ‍್ಯಾಲಿಬಸವ ಜಯಂತಿ: ರಾಯಚೂರು ಬಸವಕೇಂದ್ರದಲ್ಲಿ ವಚನ ಗಾಯನ, ಸುಗಮ ಸಂಗೀತಅಂಡಮಾನ್ ದ್ವೀಪದಲ್ಲಿ ವೈಚಾರಿಕ ಬಸವ ಜಯಂತಿ ಕಾರ್ಯಕ್ರಮಅದ್ದೂರಿ ಮೆರವಣಿಗೆಯೊಂದಿಗೆ ಮೈಸೂರಿನಲ್ಲಿ ಬಸವ ಜಯಂತಿ ಶುರುಮಂಡ್ಯದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪಿಸಲು ಒತ್ತಾಯಶಹಾಪುರದಲ್ಲಿ 30 ಯುವಕರಿಂದ ರಕ್ತದಾನಓಲೆಮಠದಲ್ಲಿ ‘ಲಿಂಗಾಯತ ಚಳವಳಿ’ ಮೇಲೆ ಉಪನ್ಯಾಸಔರಾದ್ ಬೈಕ್ ರ್‍ಯಾಲಿಯಲ್ಲಿ ನೂರಾರು ಬಸವ ಭಕ್ತರು ಬಾಗಿಪಾಂಡೋಮಟ್ಟಿ : ಶೂದ್ರರು, ಮಹಿಳೆಯರು, ದಲಿತರನ್ನು ಒಗ್ಗೂಡಿಸಿದ ಬಸವಣ್ಣ

ಬೆಂಗಳೂರು

6 min agoApril 20, 2026 6:03 pm

ಮುಂದಿನ ವರ್ಷ ಏಪ್ರಿಲ್ 20ಕ್ಕೆ ನೂತನ ಅನುಭವ ಮಂಟಪ ಲೋಕಾರ್ಪಣೆ: ಖಂಡ್ರೆ

7 min agoApril 20, 2026 6:03 pm

ಬಸವಣ್ಣನವರ ತತ್ವಗಳು ಸಮಾಜಕ್ಕೆ ದಾರಿದೀಪ: ಸಚಿವ ಶರಣಪ್ರಕಾಶ ಪಾಟೀಲ

30 min agoApril 20, 2026 5:40 pm

ಬಸವ ಪುತ್ಥಳಿಗೆ ಶಂಕುಸ್ಥಾಪನೆ, ಬೆಲ್ದಾಳ ಶರಣರಿಗೆ ಪ್ರಶಸ್ತಿ ಪ್ರದಾನ ಮಾಡಿದ ಸಿಎಂ

1 hr 4 min agoApril 20, 2026 5:05 pm

ಭಾಲ್ಕಿ ರ‍್ಯಾಲಿಯಲ್ಲಿ ನೂರಾರು ಬೈಕ್, ಕಾರುಗಳು

5 hr 42 min agoApril 20, 2026 1:28 pm

ಕೊಪ್ಪಳದಲ್ಲಿ ಬಸವಾದಿ ಶರಣರ ವಚನಕಟ್ಟುಗಳ ಹೊತ್ತು ಜಾಥಾ

5 hr 42 min agoApril 20, 2026 1:27 pm

ವಿಜಯಪುರದಲ್ಲಿ ಬಸವ ಜಯಂತಿ: ಮಹಿಳೆಯರ ಬೈಕ್ ರ‍್ಯಾಲಿ

6 hr 42 min agoApril 20, 2026 12:28 pm

ಬಸವನಬಾಗೇವಾಡಿ: ಷಟ್‌ಸ್ಥಲಗಳು ವಚನಕಾರರ ಅನುಭಾವದ ಸಾರ

7 hr 9 min agoApril 20, 2026 11:01 am

ಜಹಿರಾಬಾದಿನಲ್ಲಿ ಬಸವತತ್ವಾಧಾರಿತ ರಸಪ್ರಶ್ನೆ ಕಾರ್ಯಕ್ರಮ

7 hr 10 min agoApril 20, 2026 11:00 am

ಬೆಳಗಾವಿಯಲ್ಲಿ ಸಮಾನತೆ ಸಂದೇಶ ಸಾರಿದ ಬೃಹತ್ ಬೈಕ್ ರ‍್ಯಾಲಿ

7 hr 10 min agoApril 20, 2026 10:59 am

ಬಸವ ಜಯಂತಿ: ರಾಯಚೂರು ಬಸವಕೇಂದ್ರದಲ್ಲಿ ವಚನ ಗಾಯನ, ಸುಗಮ ಸಂಗೀತ

7 hr 11 min agoApril 20, 2026 10:59 am

ಅಂಡಮಾನ್ ದ್ವೀಪದಲ್ಲಿ ವೈಚಾರಿಕ ಬಸವ ಜಯಂತಿ ಕಾರ್ಯಕ್ರಮ

7 hr 11 min agoApril 20, 2026 10:58 am

ಅದ್ದೂರಿ ಮೆರವಣಿಗೆಯೊಂದಿಗೆ ಮೈಸೂರಿನಲ್ಲಿ ಬಸವ ಜಯಂತಿ ಶುರು

7 hr 14 min agoApril 20, 2026 10:55 am

ಮಂಡ್ಯದಲ್ಲಿ ಬಸವಣ್ಣನವರ ಪುತ್ಥಳಿ ಸ್ಥಾಪಿಸಲು ಒತ್ತಾಯ

ಮಂಡ್ಯ

‘ಸಾಮಾಜಿಕ ಸಮಾನತೆ ಸಾರಿದ ಬಸವಣ್ಣ ಅವರ ಅಶ್ವಾರೂಢ ಸಮೇತ ಪುತ್ಥಳಿಯನ್ನು ಜಿಲ್ಲಾಧಿಕಾರಿ ಕಚೇರಿ ಎದುರು ನಿರ್ಮಿಸಬೇಕು’ ಎಂದು ವೀರಶೈವ ಲಿಂಗಾಯತ ವೇದಿಕೆ ಅಧ್ಯಕ್ಷ ಸುಂಡಹಳ್ಳಿ ಸೋಮಶೇಖರ್ ಒತ್ತಾಯಿಸಿದರು.

‘ಬಸವ ಜಯಂತಿಯಂದು ಜಿಲ್ಲೆಯ ಎಲ್ಲಾ ಮಠಾಧೀಶರನ್ನು ಆಹ್ವಾನಿಸಬೇಕು. ಜೊತೆಗೆ ವಿವಿಧ ಕಾಯಕ ಮಾಡುವ ಎಲ್ಲಾ ಸಮಾಜದ ಮುಖಂಡರನ್ನು ಗುರುತಿಸಿ ಜಿಲ್ಲಾಡಳಿತ ‘ಬಸವಶ್ರೀ’ ಪ್ರಶಸ್ತಿ ನೀಡಿ ಗೌರವಿಸಬೇಕು’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

‘ಬಸವಣ್ಣ ಅವರ ತತ್ವಗಳು ಇಂದಿನ ಸಮಾಜಕ್ಕೆ ಅವಶ್ಯಕವಾಗಿದ್ದು, ಜಿಲ್ಲಾಡಳಿತ, ಮಂಡ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಡೆಯುತ್ತಿರುವ ಬಸವೇಶ್ವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸೋಣ’ ಎಂದರು.

ವೇದಿಕೆಯ ಎಂ.ಎಸ್.ಮಂಜುನಾಥ್ ಮಾತನಾಡಿ, ‘ಬಸವಣ್ಣನವರ ವಚನಗಳು ಕೇವಲ ಭಾಷಣದಲ್ಲಿ ಇರಬಾರದು, ನರೇಂದ್ರ ಮೋದಿ ಅವರು ಸಂಸತ್‌ ಎದುರು ಬಸವಣ್ಣನವರ ಪುತ್ಥಳಿ ಸ್ಥಾಪಿಸಬೇಕು. ಎಲ್ಲಾ ಭಾಷೆಗಳಲ್ಲಿಯೂ ವಚನಗಳನ್ನು ಪ್ರಚುರ ಪಡಿಸಲು ಕೇಂದ್ರ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಶಿವರುದ್ರಪ್ಪ, ಶಿವಲಿಂಗಯ್ಯ, ಕೃಷ್ಣರಾಜೇ ಅರಸ್, ಮಲ್ಲಿಕಾರ್ಜುನಪ್ಪ ಇದ್ದರು.

7 hr 16 min agoApril 20, 2026 10:54 am

ಶಹಾಪುರದಲ್ಲಿ 30 ಯುವಕರಿಂದ ರಕ್ತದಾನ

ಶಹಾಪುರ

ನಗರದ ಫಕೀರೇಶ್ವರ ಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಮತ್ತು ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಶ್ರಯದಲ್ಲಿ ಬಸವ ಜಯಂತ್ಯುತ್ಸವ ಪ್ರಯುಕ್ತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಫಕೀರೇಶ್ವರ ಮಠದ ಗುರುಪಾದೇಶ್ವರ ಸ್ವಾಮೀಜಿ ‘ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಬಹುದು. ಸ್ಥಳೀಯ ಯುವಕರು ಇಂತಹ ಉತ್ತಮ ಕಾರ್ಯದಲ್ಲಿ ತೊಡಗಿರುವುದು ಅವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ’ ಎಂದರು.

ಒಟ್ಟು 30 ಯುವಕರು ರಕ್ತದಾನ ಮಾಡಿದರು.

ಇದೇ ಸಂದರ್ಭದಲ್ಲಿ ವೈದ್ಯ ಡಾ.ಚೇತನ್ ಉಪ್ಪಿನ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ದಣ್ಣ ಆರಬೋಳ, ಸುನಿಲ್ ಶಿರಣಿ, ರಾಜು ಆನೆಗುಂದಿ, ಶರಣಯ್ಯ ಸ್ವಾಮಿ, ಅಲ್ಲಮಪ್ರಭು, ಶಂಭಲಿಂಗ ಗೋಗಿ, ಹೊನ್ನರೆಡ್ಡಿ ಶಾರದಹಳ್ಳಿ, ದೇವೇಂದ್ರಪ್ಪ ಅರಿಕೇರಿ ಸೇರಿದಂತೆ ಉಪಸ್ಥಿತರಿದ್ದರು.

7 hr 16 min agoApril 20, 2026 10:53 am

ಓಲೆಮಠದಲ್ಲಿ ‘ಲಿಂಗಾಯತ ಚಳವಳಿ’ ಮೇಲೆ ಉಪನ್ಯಾಸ

ಜಮಖಂಡಿ

‘ಧಾರ್ಮಿಕ ಸಮಾನತೆ ಮತ್ತು ಲಿಂಗ ಸಮಾನತೆ ತರುವುದು ಚಳವಳಿಯ ಮುಖ್ಯ ಉದ್ದೇಶವಾಗಿತ್ತು’ ಎಂದು ವಿಜಯಪುರದ ಬಸವ ತತ್ವ ಚಿಂತಕ ಜೆ.ಎಸ್.ಪಾಟೀಲ ಹೇಳಿದರು.

ಬಸವ ಜಯಂತಿ ಅಂಗವಾಗಿ ಓಲೆಮಠದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ‘ಲಿಂಗಾಯತ ಚಳವಳಿ ಸಮಗ್ರ ಚಿಂತನೆ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಾತಿ ಅಸಮಾನತೆ ಹೋಗಲಾಡಿಸಿ, ಮಂದಿರಗಳಿಂದ ಆಗುತ್ತಿದ್ದ ಶೋಷಣೆ ತಪ್ಪಿಸಲು ಬಸವಣ್ಣ ಇಷ್ಟಲಿಂಗ ನೀಡಿ ಕಾಯಕ-ದಾಸೋಹ ಆರ್ಥಿಕ ಸೂತ್ರಗಳನ್ನು ಜಾರಿಗೊಳಿಸಿದರು, ಎಂದು ತಿಳಿಸಿದರು.

‘12ನೇ ಶತಮಾನದ ಬಸವಾದಿ ಶಿವಶರಣರು ನಡೆಸಿದ ಚಳವಳಿಯ ಉತ್ಪನ್ನವಾಗಿ ಹುಟ್ಟಿದ ಧರ್ಮ ಇಂದು ಲಿಂಗಾಯತ ಧರ್ಮವಾಗಿದೆ. ರಾಜ್ಯದಾದ್ಯಂತ ಐದು ಸಾವಿರ ಲಿಂಗಾಯತ ಮಠಗಳಿದ್ದರೂ ಲಿಂಗಾಯತ ಧರ್ಮದ ಆಚರಣೆ ಸಂಪೂರ್ಣವಾಗಿ ಅನುಷ್ಠಾನವಾಗಿಲ್ಲ’ ಎಂದರು.

ಬೀಳಗಿಯ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಬಯಸಿದ್ದು ಸಿಗಬೇಕು ಮತ್ತು ಸಿಕ್ಕಿದ್ದು ಶಾಶ್ವತವಾಗಿ ನಮ್ಮ ಹತ್ತಿರ ಉಳಿಯಬೇಕು ಎಂಬ ವಿಷಯ ವಾಸನೆಯಿಂದ ದೂರ ಉಳಿದು, ಇದ್ದುದರಲ್ಲಿಯೇ ಸಂತೃಪ್ತ ಜೀವನ ನಡೆಸಬೇಕು’ ಎಂದು ತಿಳಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ ತುಂಗಳ, ಆಲಬಾಳದ ರೈತ ಸೋಮನಗೌಡ ಪಾಟೀಲ, ಭಾಗ್ಯಶ್ರೀ ಕೋಟಿ, ಜ್ಯೋತಿ ಕಟಗಿ ಮಾತನಾಡಿದರು.

ಕಲ್ಯಾಣ ಮಠದ ಗೌರಿಶಂಕರ ಸ್ವಾಮೀಜಿ, ಅರ್ಜುಣಗಿಯ ಗುರುದೇವ ದೇವರು ಸಾನ್ನಿಧ್ಯ ವಹಿಸಿದ್ದರು. ಓಲೆಮಠದ ಆನಂದ ದೇವರು ನೇತೃತ್ವ ವಹಿಸಿದ್ದರು.

7 hr 18 min agoApril 20, 2026 10:51 am

ಔರಾದ್ ಬೈಕ್ ರ್‍ಯಾಲಿಯಲ್ಲಿ ನೂರಾರು ಬಸವ ಭಕ್ತರು ಬಾಗಿ

ಔರಾದ್

ಬಸವಣ್ಣನವರ ಜಯಂತ್ಯುತ್ಸವ ಅಂಗವಾಗಿ ಭಾನುವಾರ ಸಂಜೆ ಪಟ್ಟಣದಲ್ಲಿ ಭವ್ಯ ಬೈಕ್ ರ್‍ಯಾಲಿ ನಡೆಯಿತು. ರ್‍ಯಾಲಿಯಲ್ಲಿ ನೂರಾರು ಯುವಕರು ಹಾಗೂ ಬಸವ ಭಕ್ತರು ಉತ್ಸಾಹದಿಂದ ಪಾಲ್ಗೊಂಡರು.

ಪಟ್ಟಣದ ಚನ್ನಬಸವ ಪಟ್ಟದ್ದೇವರ ವೃತ್ತದ ಬಳಿ ಮುಖಂಡ ಸಾಗರ ಪಾಟೀಲ, ಉದ್ಯಮಿ ಪ್ರಕಾಶ ಘುಳೆ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ರ್‍ಯಾಲಿಗೆ ಚಾಲನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಮಾತನಾಡಿ, ‘ಬಸವಣ್ಣನವರ ಸಮಾನತೆ, ಶ್ರೇಷ್ಠ ಮಾನವೀಯ ಮೌಲ್ಯಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳುವುದು ಅತ್ಯಂತ ಅಗತ್ಯ’ ಎಂದರು.

ಬಸವಣ್ಣನವರ ಭಾವಚಿತ್ರ ಹಾಗೂ ಧ್ವಜಗಳ ಅಲಂಕಾರಗಳೊಂದಿಗೆ ನೂರಾರು ಬೈಕ್ ಸವಾರರು ಚನ್ನಬಸವ ಪಟ್ಟದ್ದೇವರು ವೃತ್ತ, ಕನ್ನಡಾಂಬೆ ವೃತ್ತ, ತಾಪಂ ಕಚೇರಿ, ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ದೇಶಮುಖ ಗಲ್ಲಿ, ಬುಟ್ಟೆ ಬಡಾವಣೆ, ಸಾರ್ವಜನಿಕ ಆಸ್ಪತ್ರೆ, ಅಗ್ನಿ ಬಸವಣ್ಣ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿತ್ತು. ರ್‍ಯಾಲಿಯಲ್ಲಿ ವಚನ ಹಾಗೂ ಬಸವ ಸಂದೇಶ ಮೊಳಗಿತು.

ಮುಖಂಡರಾದ ಬಂಡೆಪ್ಪ ಕಂಟೆ, ರವೀಂದ್ರ ಮೀಸೆ, ಗುಂಡಯ್ಯ ಸ್ವಾಮಿ, ರಘುನಾಥ ಪಾಟೀಲ, ಮಲ್ಲಿಕಾರ್ಜುನ ಹಿಪ್ಪಳಗಾಂವೆ, ಕಲ್ಲಪ್ಪ ದೇಶಮುಖ, ಡಾ. ವೈಜಿನಾಥ ಬುಟ್ಟೆ, ಶರಣಪ್ಪ ಪಾಟೀಲ, ಶರಣಪ್ಪ ನಾಗಲಗಿದ್ದೆ, ಜಗನ್ನಾಥ ಮೂಲಗೆ, ಮಲ್ಲಿಕಾರ್ಜುನ ಟಂಕಸಾಲೆ, ಚಂದ್ರಕಾಂತ ಘುಳೆ, ಡಾ. ಧನರಾಜ ರಾಗಾ, ಶ್ರೀನಿವಾಸ ಖೂಬಾ, ಬಸವರಾಜ ಹಳ್ಳೆ, ಶರಣಪ್ಪ ಚಿಟ್ಮೆ, ರಾಜಕುಮಾರ ನಾಯ್ಕ, ಚೇತನ ಕಪ್ಪೆಕೇರಿ, ಕಿರಣ ಉಪ್ಪೆ, ಅಶೋಕ ಶೆಂಬೆಳ್ಳಿ, ಶಿವಕುಮಾರ ಕಾಂಬಳೆ, ವೀರೇಶ ಅಲಮಾಜೆ, ಬಸವರಾಜ ಶೆಟಕಾರ, ಅಶೋಕ ಅಲಮಾಜೆ, ಬಸವರಾಜ ಚೌಕಂಪಳ್ಳೆ, ಚಂದ್ರಕಾಂತ ಜೋಶಿ, ಬಸವರಾಜ ಮಾನೂರೆ, ಸಂದೀಪ ಪಾಟೀಲ, ಆನಂದ ದ್ಯಾಡೆ, ಶಂಕು ನಿಶ್ಪತೆ, ಸಾಗರ ಚಿದ್ರೆ, ಮಹಾದೇವ ಸಿಂಧೆ, ಅನೀಲ ಮೇತ್ರೆ ಪಾಲ್ಗೊಂಡಿದ್ದರು.

7 hr 20 min agoApril 20, 2026 10:50 am

ಪಾಂಡೋಮಟ್ಟಿ : ಶೂದ್ರರು, ಮಹಿಳೆಯರು, ದಲಿತರನ್ನು ಒಗ್ಗೂಡಿಸಿದ ಬಸವಣ್ಣ

ಪಾಂಡೋಮಟ್ಟಿ (ಚನ್ನಗಿರಿ)

‘ಶೂದ್ರರು ಹಾಗೂ ದಲಿತರನ್ನು ಒಗ್ಗೂಡಿಸಿದ್ದು ಅನುಭವ ಮಂಟಪ’ ಎಂದು ವಿರಕ್ತ ಮಠದ ಗುರುಬಸವ ಸ್ವಾಮೀಜಿ ತಿಳಿಸಿದರು.

ಇಲ್ಲಿನ ವಿರಕ್ತ ಮಠದಲ್ಲಿ ಶನಿವಾರ ನಡೆದ ವಿಶ್ವಗುರು ಬಸವೇಶ್ವರರ ಜಯಂತ್ಯುತ್ಸವ ಹಾಗೂ 882ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

‘ಬಸವಣ್ಣನವರು ಮನುಷ್ಯರ ನಡುವೆ ತಾರತಮ್ಯ ಮಾಡದೆ ಎಲ್ಲರೂ ಒಂದೇ ಎಂಬ ವಾತಾವರಣ ಸೃಷ್ಟಿಸಿದ್ದರು. ಶತಮಾನಗಳಿಂದ ತುಳಿತಕ್ಕೆ ಒಳಗಾಗಿದ್ದ ಶೂದ್ರರು, ಮಹಿಳೆಯರು, ದಲಿತರನ್ನು ಅನುಭವ ಮಂಟಪದಲ್ಲಿ ಒಗ್ಗೂಡಿಸಿದ್ದರು. ಲಿಂಗಾಯತ ಧರ್ಮದಲ್ಲಿ ವೈಜ್ಞಾನಿಕತೆ, ವೈಚಾರಿಕತೆ, ಸರಳತೆ ಹಾಗೂ ಎಲ್ಲರೂ ಒಪ್ಪುವಂತಹ ಆಂಶಗಳು ಇವೆ’ ಎಂದು ತಿಳಿಸಿದರು.

‘ಸಾಧನೆ ಮತ್ತು ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದನ್ನೇ ಬಸವಣ್ಣ ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ. ಇತಿಹಾಸದಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಮೇಲೆ ಅಧಿಕ ಕೃತಿಗಳು ರಚನೆಯಾಗಿವೆ ಎಂದರೆ ಅದು ಬಸವಣ್ಣ ಅವರ ಮೇಲೆ ಮಾತ್ರ’ ಎಂದು ಕಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಎಸ್.ಎನ್. ಆನಂದ್ ಹೇಳಿದರು.

ದಾವಣಗೆರೆಯ ಆದಿತ್ಯ, ಇಂಚರಾ, ಎನ್.ಎಸ್. ರಾಜು, ಚಿಕ್ಕನಲ್ಲೂರು ಬಿ. ರಾಜಪ್ಪ, ಪಿಎಸ್ಐ ರೂಪ್ಲಿಬಾಯಿ, ಸಿದ್ದೇಶ್, ಚನ್ನಬಸಪ್ಪ, ಶಿವಮೂರ್ತಪ್ಪ, ಚಂದ್ರಪ್ಪ, ಎಸ್.ಆರ್. ಕುಮಾರ್, ರಾಜು ಉಜ್ಜನಪ್ಪ, ನಂಜಪ್ಪ ಉಪಸ್ಥಿತರಿದ್ದರು.

Share This Article
Leave a comment

Leave a Reply

Your email address will not be published. Required fields are marked *